ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಹೊಸ ರೂಲ್ಸ್! ಏನು ಗೊತ್ತಾ?
ಸರ್ಕಾರ ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು ಇದರ ಪ್ರಕಾರ ಇನ್ನು ಮುಂದೆ ಆಸ್ತಿ ಖರೀದಿ (Property Purchase) ಹಾಗೂ ಮಾರಾಟ (Sale) ಇನ್ನಷ್ಟು ದುಬಾರಿ ಆಗಲಿದೆ.
ಇನ್ನು ಮುಂದೆ ಆಸ್ತಿ ಖರೀದಿ ಅಥವಾ ಮಾರಾಟ (Property Sale) ಅಷ್ಟು ಸುಲಭವಲ್ಲ. ಯಾಕಂದ್ರೆ ಸರ್ಕಾರ ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು ಇದರ ಪ್ರಕಾರ ಇನ್ನು ಮುಂದೆ ಆಸ್ತಿ ಖರೀದಿ (Property Purchase) ಹಾಗೂ ಮಾರಾಟ (Sale) ಇನ್ನಷ್ಟು ದುಬಾರಿ ಆಗಲಿದೆ.
ಇತ್ತೀಚಿನ ದಿನಗಳಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಅಷ್ಟು ಸುಲಭವಲ್ಲ ಯಾಕಂದ್ರೆ ಇದರ ದರ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಇದರ ಜೊತೆಗೆ ಇದೀಗ ರಾಜ್ಯ ಸರ್ಕಾರ ಕೂಡ ಆಸ್ತಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಇದೊಂದು ಶಾಕಿಂಗ್ ಸುದ್ದಿ ಆಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಆಸ್ತಿ ಪರಿಷ್ಕೃತ ಮಾರ್ಗಸೂಚಿಗೆ ಸರ್ಕಾರ ಮುಂದಾಗಿದೆ. ಅಕ್ಟೋಬರ್ 1ರಿಂದಲೇ ಪರಿಷ್ಕೃತ ಮಾರ್ಗಸೂಚಿ ಜಾರಿಯಾಗಿದ್ದು ಇದರ ಅಡಿಯಲ್ಲಿ ಆಸ್ತಿ ಖರೀದಿ ಹಾಗೂ ಮಾರಾಟ ಶೇಕಡ 30ರಷ್ಟು ಹೆಚ್ಚಳವಾಗಿದೆ.
ಇಂಥವರಿಗೆ ರೇಷನ್ ಕಾರ್ಡ್ ಸಿಗೋದಿಲ್ಲ, ಇರೋ ರೇಷನ್ ಕಾರ್ಡ್ ಕೂಡ ರದ್ದಾಗುತ್ತೆ; ರಾತ್ರೋರಾತ್ರಿ ಆದೇಶ
ಸರ್ಕಾರದ ಈ ಹೊಸ ಮಾರ್ಗಸೂಚಿ ನಿವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳಿಗೆ (Immovable property) ಅನ್ವಯವಾಗಲಿದೆ. ಸರ್ಕಾರದ ಈ ಹೊಸ ಮಾರ್ಗಸೂಚಿಯ ಪ್ರಕಾರ, ಮಾರುಕಟ್ಟೆ ದರಕ್ಕಿಂತ 500 ರಿಂದ 2000 ಪಟ್ಟು ಮಾರ್ಗಸೂಚಿ ದರ ಏರಿಕೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಐದರಿಂದ ಹತ್ತು ಲಕ್ಷ ರೂಪಾಯಿಗಳು ಇದ್ದರೆ ಮಾರುಕಟ್ಟೆ ದರ 10 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ, ಅಂದರೆ ಮಾರ್ಗಸೂಚಿ ದರ 50ರಷ್ಟು ಹೆಚ್ಚಳವಾಗಿದೆ ಎನ್ನಬಹುದು.
ಐದು ವರ್ಷಗಳ ನಂತರ ಮಾರ್ಗಸೂಚಿ ದರ ಪರಿಷ್ಕರಣೆ: (Revision of guideline rates for immovable):
ಕಳೆದ 2018ರಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿತ್ತು. ಈಗ ಮತ್ತೆ ಪರಿಷ್ಕರಣೆ ಮಾಡಿ ಮಾರ್ಗಸೂಚಿ ದರವನ್ನು ಹೆಚ್ಚಿಸಲಾಗಿದ್ದು ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ರಾಮನಗರ ಮೊದಲಾದ ಬೆಂಗಳೂರಿಗೆ (Bengaluru) ಹತ್ತಿರವಿರುವ ಜಿಲ್ಲೆಗೆ ಈ ಹೊಸ ನಿಯಮ ಅನ್ವಯವಾಗುತ್ತದೆ.
ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ!
ಗ್ರಾಮೀಣ ಪ್ರದೇಶಕ್ಕೂ ಮುಟ್ಟಿದ ಮಾರ್ಗ ಸೂಚಿ ದರ ಹೆಚ್ಚಳದ ಭೀತಿ
ಬೆಂಗಳೂರಿನ ವಿಚಾರಕ್ಕೆ ಬಂದರೆ ಎಲೆಕ್ಟ್ರಾನಿಕ್ ಸಿಟಿ (Electronic City) ಹಾಗೂ ಆಸುಪಾಸಿನ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ರಿಂದ 2000 ಪಟ್ಟು ಹೆಚ್ಚಳವಾಗಿದೆ ಅಂದ್ರೆ ಶಾಕ್ ಆಗಬಹುದು. ಈ ಬಗ್ಗೆ ಕೃಷ್ಣ ಬೈರೇಗೌಡ (Krishna Bairegowda) ಅವರು ಮಾತನಾಡಿದ್ದು, ಮಾರ್ಗಸೂಚಿ ದರ ಪರಿಷ್ಕರಣೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
1 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ತಿರಸ್ಕಾರ; ಇಂತಹವರಿಗೆ ಗೃಹಲಕ್ಷ್ಮಿ ಹಣ ಇನ್ನು ಸಿಗುವುದಿಲ್ಲ
ಮಾರ್ಗಸೂಚಿ ಪರಿಷ್ಕರಣೆ ದರದಿಂದ ಕಂದಾಯ ಇಲಾಖೆಗೆ ದೊಡ್ಡ ಮೊತ್ತದ ಆದಾಯ ಸಂದಾಯ ವಾಗುವುದಂತು ನಿಜ. ಇದರ ಜೊತೆಗೆ ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ವಂಚನೆ ಆಗಬಾರದು ಎನ್ನುವುದು ಕೂಡ ಸರ್ಕಾರದ ಉದ್ದೇಶ. ಮುದ್ರಾಂಕ ಇಲಾಖೆಗೆ 2023 -24ರ ಸಾಲಿನಲ್ಲಿ 25,000 ಕೋಟಿ ತೆರಿಗೆ (Tax) ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಕ್ಟೋಬರ್ ಒಂದರಿಂದಲೇ ಜಾರಿ:
ಅಕ್ಟೋಬರ್ ಒಂದು ಹಾಗೂ ಎರಡನೇ ತಾರೀಕು ರಜಾ ದಿನಗಳು (Holidays) ಇದ್ದ ಕಾರಣ ಪರಿಷ್ಕೃತ ದರಗಳ ಬಗ್ಗೆ ಜನರಿಗೆ ಅಕ್ಟೋಬರ್ 3 ನೇ ತಾರೀಖಿನಿಂದ ಮಾಹಿತಿ ನೀಡಲಾಗಿದೆ. ಈಗಾಗಲೇ ಆಸ್ತಿ ನೋಂದಣಿ ಪ್ರಕ್ರಿಯೆ ಕೂಡ ಹೆಚ್ಚಾಗಿದ್ದು ಪರಿಷ್ಕೃತ ದರ ಜನರ ಮೇಲೆ ಭಾರಿ ಪರಿಣಾಮ ಬೀರಲಿದೆ.
New guidelines for buying and selling property in these districts including Bengaluru
Follow us On
Google News |