ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ
ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರ (state government) ನೂರಾರು ಎಕರೆ ಜಮೀನುಗಳನ್ನು ಸೈಟ್ (site) ಆಗಿ ಮಾರ್ಪಡಿಸಿ ವಿತರಣೆ ಮಾಡಲು ನಿರ್ಧರಿಸಿದ್ದು, ಫಲಾನುಭವಿಗಳು ಈ ಸೈಟ್ ಅನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಾಗುತ್ತದೆ.
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸೈಟ್ (Site in Bengaluru rural area)
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಸಾಕಷ್ಟು ನಿರಾಶ್ರಿತರು, ತಮ್ಮ ಹೆಸರಿನಲ್ಲಿ ಸೈಟ್ ಪಡೆದುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 527 ಎಕರೆ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿಯಲ್ಲಿ ನಿರಾಶ್ರಿತರಿಗೆ ಸೈಟ್ ಕೊಡಲು ಸರ್ಕಾರ ತೀರ್ಮಾನಿಸಿದೆ.
ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರು ರಾಜ್ಯ ಸರ್ಕಾರ ತಮಗೆ ಯಾವಾಗ ಮನೆ ವಿತರಣೆ ಮಾಡುತ್ತದೆಯೋ ಎಂದು ಕಾದು ಕುಳಿತಿದ್ದಾರೆ.
ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಇದೇ ಸಮಯಕ್ಕೆ ಸೈಟ್ ವಿತರಣೆ ಮಾಡಲು ಕೂಡ ಸರ್ಕಾರ ಮುಂದಾಗಿದ್ದು ಜನರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಯಾಕಂದ್ರೆ ಹೇಳಿದಷ್ಟು ಸುಲಭವಾಗಿ ಸೈಟ್ ವಿತರಣೆ ಮಾಡಲು ಸಾಧ್ಯವಿಲ್ಲ ಇದಕ್ಕೆ ಸಾವಿರಾರು ಕೋಟಿಗಳನ್ನು ಮೀಸಲಿಡಬೇಕು. ಸರ್ಕಾರಕ್ಕೆ ಮತ್ತೆ ಇಷ್ಟು ಹಣವನ್ನು ಮತ್ತೆ ವ್ಯಯಿಸಲು ಸಾಧ್ಯವಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ.
ಆಶ್ರಯ ಯೋಜನೆ ಅಡಿಯಲ್ಲಿ ಸೈಟ್ ವಿತರಣೆ!
ಸ್ವಲ್ಪ ಜಮೀನು ಹೊಂದಿರುವ ರೈತರು (farmers ) ತಮ್ಮ ಜಮೀನಿನಲ್ಲಿ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಬಹುದು. ಆದರೆ ತುಂಬಾ ಜಾಗವನ್ನು ಹೊಂದಿಲ್ಲದೆ ಇರುವ ನಿರಾಶ್ರಿತರು ದೊಡ್ಡ ಕುಟುಂಬದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿ ಇದೆ.
ಇಂಥವರಿಗೂ ಕೂಡ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸು ಇದ್ದರು ಅದನ್ನು ಜೀವನ ಪರ್ಯಂತ ಸಾಕಾರಗೊಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದನ್ನು ಮನಗಂಡಿರುವ ಸರ್ಕಾರ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸದ್ಯ ನಿವೇಶನ ವಿತರಣೆ ಮಾಡಲು ನಿರ್ಧರಿಸಿದೆ.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯೋಕೆ ಕಡ್ಡಾಯ ರೂಲ್ಸ್ ಜಾರಿ!
ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ತಿಳಿಸಿರುವಂತೆ, ಆಶ್ರಯ ನಿವೇಶನ (ashraya scheme) ಗಳಿಗೆ ಈಗಾಗಲೇ ಹಲವು ಕಡೆ ಜಮೀನು ಗುರುತಿಸಿ ಮಂಜೂರಾತಿ ಮಾಡಲಾಗಿದೆ ಕ್ಷೇತ್ರದಲ್ಲಿಯೇ ಈ ಸೈಟ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಹೊಸಪೇಟೆ ಜಿಲ್ಲೆ (Hospet district) ಯ ನಾಲ್ಕು ತಾಲೂಕುಗಳಲ್ಲಿ 327 ಎಕರೆ ಜಾಗವನ್ನು ಗುರುತಿಸಲಾಗಿದೆ. 46.67 ಎಕರೆ ಜಾಗ ನೆಲಮಂಗಲ ಭಾಗದಲ್ಲಿ ಗುರುತಿಸಲಾಗಿದೆ.
ಸೈಟ್ ವಿತರಣೆಗೆ ಮೀಸಲಾಗಿರುವ ಜಾಗದ ವಿವರ
ದೇವನಹಳ್ಳಿ ತಾಲೂಕು 62.14 ಎಕರೆ ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕು 93.39 ಎಕರೆ ಗುರುತಿಸಲಾಗಿದೆ
ಹೊಸಕೋಟೆ ತಾಲೂಕು 324.20 ಎಕರೆ ಜಾಗ ಗುರುತಿಸಲಾಗಿದೆ.
ನೆಲಮಂಗಲ ತಾಲೂಕು 46.37 ಎಕರೆ ಜಾಗ ಗುರುತಿಸಲಾಗಿದೆ.
ಇಂತಹ ರೇಷನ್ ಕಾರ್ಡ್ ಕುಟುಂಬಗಳಿಗೆ ಇನ್ಮುಂದೆ ಸಿಗೋದಿಲ್ಲ ಉಚಿತ ರೇಷನ್!
ನಿವೇಶನ ಹಂಚಿಕೆ ವಿಚಾರದಲ್ಲಿ ಜಾಗೃತಿ ಮಾಡುತ್ತಿರುವ ಸರಕಾರ!
ನಿವೇಶನ ಹಂಚಿಕೆ ಮಾಡುವ ಭರವಸೆಯನ್ನು ನೀಡಿದಷ್ಟು ಸುಲಭವಾಗಿ ಅದನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮುಂಬರುವ ಚುನಾವಣೆ (election) ಯ ಒಳಗೆ ಸೈಟ್ ವಿತರಣೆ ಮಾಡುವುದಾಗಿ ಘೋಷಿಸಿ ಅದನ್ನು ಜನರಿಗೆ ವಿತರಣೆ ಮಾಡದೇ ಇದ್ದಲ್ಲಿ ರಾಜಕೀಯ ಪಕ್ಷದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ.
ಇನ್ನು ಸೈಟ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಾಜಕೀಯ ಪಕ್ಷಗಳ ಭರವಸೆಯ ಆಧಾರದ ಮೇಲೆ ಮತ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಜನರ ವಿಶ್ವಾಸ ಗಳಿಸಿಕೊಳ್ಳುವುದಕ್ಕಾಗಿ ನಿವೇಶನದ ಬಗ್ಗೆ ಕೇವಲ ಮಾಹಿತಿ ನೀಡಿದರೆ ನಂತರ ಅದನ್ನು ಈಡೇರಿಸದೆ ಇದ್ದರೆ, ಸಾರ್ವಜನಿಕರು ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಬಹಳ ಮುತುವರ್ಜಿಯಿಂದ ಹೆಜ್ಜೆ ಇಡುತ್ತಿದೆ ಎನ್ನಬಹುದು.
ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣೆಗೂ ಮೊದಲು ನಿವೇಶನ ಹಂಚಿಕೆ ಮಾಡಿದರೆ ನಿವೇಶನದಿಂದ ವಂಚಿತರಾಗಿರುವವರ ಮತ ಅಂತಹ ರಾಜಕೀಯ ಪಕ್ಷಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿವೇಶನ ಹಂಚಿಕೆಯ ಬಗ್ಗೆ ಸರ್ಕಾರ ಮಹತ್ವದ ನಿರ್ಣಯ ಕೈಗೊಳ್ಳಲಿದೆ.
The government is to distribute free houses to the poor Families