Sandalwood News

ಶಿವಣ್ಣ-ಶ್ರೀಮುರಳಿಯೊಂದಿಗೆ ಮಿಂಚಿದ ನಟಿ ಶ್ರೀದೇವಿ ಇದ್ದಕ್ಕಿದ್ದ ಹಾಗೆ ಕಣ್ಮರೆಯಾದದ್ದು ಯಾಕೆ? ಅಪ್ಸರೆಯಂತಿದ್ದ ಈ ನಟಿ ಈಗ ಹೇಗಾಗಿದ್ದಾರೆ ಗೊತ್ತಾ?

ನಟಿ ಶ್ರೀದೇವಿ ವಿಜಯ್ ಕುಮಾರ್ (Actress Sridevi Vijaykumar) ಎಂದೊಡನೆ ಅಷ್ಟು ಸುಲಭವಾಗಿ ಯಾರಿಗೂ ನೆನಪಾಗೋದಿಲ್ಲ ಅದೇ ಶಿವರಾಜ್ ಕುಮಾರ್ (Actor Shiva Rajkumar) ಅವರ ಕಾಂಚನಗಂಗಾ ಹಾಗೂ ಶ್ರೀಮುರಳಿ ಅವರೊಂದಿಗೆ ನಿನಗಾಗಿ ಸಿನಿಮಾದಲ್ಲಿ (Ninagagi Kannada Cinema) ಅಭಿನಯಿಸಿರುವ ನಟಿಯಂದ್ರೆ ಅವರ ಮುದ್ದುಮುಖ ಪ್ರತಿಯೊಬ್ಬ ಕನ್ನಡಿಗರ ಕಣ್ಣ ಮುಂದೆ ಬಂದುಬಿಡುತ್ತದೆ.

ನೀಡಿದಂತಹ ಪಾತ್ರಕ್ಕೆ ಬಹಳ ಮುಗ್ಧವಾಗಿ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದಿದಂತಹ ಈ ಬೆಡಗಿ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಮಾಯವಾದದ್ದು ಯಾಕೆ?

Kannada Kanchana Ganga Cinema Fame Sridevi Vijaykumar Interesting Facts

ಈಗ ಹೇಗಿದ್ದಾರೆ? ಅವಕಾಶಗಳ ಸುರಿಮಳೆ ಇರುವಾಗಲೇ ಈ ನಟಿ ಮದುವೆಯಾದದ್ದು ಯಾರನ್ನ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟಿ ಪಂಡರಿಬಾಯಿ ತಮ್ಮ ಸಿನಿ ಬದುಕಿನಲ್ಲಿ ಸಂಪಾದಿಸಿದ ಒಟ್ಟು ಆಸ್ತಿ ಮೌಲ್ಯ ಎಷ್ಟು? ತಾನು ಗಳಿಸಿದ್ದೆಲ್ಲಾ ದಾನವಾಗಿ ಕೊಟ್ಟಿದ್ದು ಯಾರಿಗೆ? ಕೊನೆಗಾಲದಲ್ಲಿ ಅನುಭವಿಸಿದ ಕಷ್ಟ ಹೇಗಿತ್ತು ಗೊತ್ತಾ?

ಹೌದು ಗೆಳೆಯರೆ ಹಿರಿಯ ನಟಿ ಮಂಜುಳಾ ವಿಜಯ್ ಕುಮಾರ್ ಅವರ ೩ನೇ ಪುತ್ರಿಯಾದ ಶ್ರೀದೇವಿ ವಿಜಯಕುಮಾರ್ ಚಿಕ್ಕಂದಿನಿಂದಲೂ ತಮ್ಮ ತಾಯಿಯಂತೆ ನಟಿಯಾಗಬೇಕು ಎಂಬ ಆಸೆಯಿಂದ ಕಾಲೇಜು ದಿನಗಳಲ್ಲಿ (College Days) ಮಾಡ್ಲಿಂಗ್ನತ್ತ (Modeling) ಗಮನಹರಿಸಿದರು.

ನೋಡಲು ಬಹಳ ಸುಂದರವಾಗಿದ್ದ ಈ ನಟಿ ತಮಿಳಿನ ರಿಕ್ಷಾ ಮಾಮ ಎಂಬ ಚಿತ್ರದ ಮೂಲಕ ಬಾಲ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು. ಆನಂತರ ಅವರ ರೋಮ್ಯಾಂಟಿಕ್ ಸಿನಿಮಾ ‘ಕಾದಲ್ ವೈರಸ್’ ನಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ತಮಿಳು ಸಿನಿಮಾ ರಂಗದಲ್ಲಿ ಸದ್ದು ಮಾಡಿದ ಶ್ರೀದೇವಿ ಆನಂತರ ತೆಲುಗಿನ ಅತಿ ಹೆಚ್ಚು ಸಿನಿಮಾಗಳ ಆಫರ್ ಪಡೆದುಕೊಂಡು ಟಾಲಿವುಡ್ನಲ್ಲಿ ಮಿಂಚಿದರು.

ನಾಗರಹಾವು ಚಿತ್ರದಲ್ಲಿ ನಟಿ ಕಲ್ಪನಾ ಮಾಡಬೇಕಿದ್ದ ಒನಕೆ ಓಬವ್ವನ ಪಾತ್ರ ನಟಿ ಜಯಂತಿ ಪಾಲಾಗಿದ್ದು ಹೇಗೆ? ಇದಕ್ಕೆ ಪುಟ್ಟಣ್ಣ ಕಣಗಾಲ್ ಒಪ್ಪಿದ್ರಾ?

Actress Sridevi Vijaykumarಹೌದು ಗೆಳೆಯರೇ ತಮಿಳಿನ ಡೇವಿಡ್ ಅಂಕಲ್, ದೈವ ಕುಂಜಂತೈ, ಸುಗಮ ಸುಮೈಗಲ್, ಅವರಂಪೂ, ಈಶ್ವರ್ ಪ್ರಿಯತಮನ್, ತೋಜಿ ಎಂಬ ತಮಿಳು ಸಿನಿಮಾಗಳಲ್ಲಿ ನಟಿಸಿ ಭಾರಿ ಬೇಡಿಕೆಯನ್ನು ಪಡೆದುಕೊಂಡಿದ್ದ ಶ್ರೀದೇವಿಯವರು ಕಾಲ ಕಳೆದಂತೆ ತೆಲುಗು ಸಿನಿಮಾ ರಂಗದಂತ ಮುಖ ಮಾಡಿದರು. ಹೀಗೆ ತೆಲುಗಿನ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

ಬಾರಿ ಸದ್ದು ಮಾಡಿದ್ದ ನಾಗಮಂಡಲ ಸಿನಿಮಾ ಅಂದಿನ ಕಾಲದಲ್ಲಿ ಗಳಿಸಿದ ಹಣ ಎಷ್ಟು ಕೋಟಿ? ಈ ಸಿನಿಮಾದ ಸಕ್ಸಸ್ ಎಷ್ಟರ ಮಟ್ಟಿಗಿತ್ತು ಗೊತ್ತಾ?

ಹಾಗೂ ಕನ್ನಡ ಸಿನಿಮಾರಂಗಕ್ಕು (Kannada Cinema Industry) ಪದಾರ್ಪಣೆ ಮಾಡಿದ ನಟಿ ಶ್ರೀದೇವಿಯವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಡನೆ ಕಾಂಚನಗಂಗಾ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರೊಂದಿಗೆ ನಿನಗಾಗಿ ಹಾಗೂ 2016ರಲ್ಲಿ ತೆರೆಕಂಡ ಲಕ್ಷ್ಮಣ ಎಂಬ ಕನ್ನಡ ಸಿನಿಮಾದಲ್ಲಿ (Kannada Movies) ಕೊನೆಯದಾಗಿ ಅಭಿನಯಿಸಿ ಆನಂತರ ಸಿನಿ ಬದುಕಿಗೆ ಗುಡ್ಬಾಯ್ ಹೇಳಿದರು.

ಅವಕಾಶಗಳು ಕೊಂಚ ಕಡಿಮೆಯಾಗುತ್ತಿದ್ದ ಹಾಗೆ 2009 ರಾಹುಲ್ ಎಂಬ ಉದ್ಯಮಿಯೊಂದಿಗೆ (Business Man) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀದೇವಿಯವರಿಗೆ 2016ರಲ್ಲಿ ರೂಪಿಕ ಎಂಬ ಹೆಣ್ಣು ಮಗು ಜನಿಸುತ್ತಾಳೆ.

ಇದಾದ ನಂತರ ಮಗಳ ಆರೈಕೆಯತ್ತ ಗಮನಹರಿಸಿದ ಈ ನಟಿ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದರು. ಇದೀಗ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಶ್ರೀದೇವಿಯವರು ಕಾಮಿಡಿ ಸ್ಟಾರ್ಸ್, ಡ್ರಾಮಾ ಜೂನಿಯರ್ಸ್ ಸೀಸನ್ ಫೋರ್ ಮುಂತಾದ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಅಪ್ಪು ಜೊತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಪಾರ್ವತಿ ಮೆನನ್ ಏನಾದ್ರು? ಕನ್ನಡ ಸಿನಿಮಾ ರಂಗ ತೊರೆದಿದ್ದು ಏಕೆ ಗೊತ್ತಾ? ಇಂಥ ಕಷ್ಟ ಯಾವ ಹೆಣ್ಣಿಗೂ ಬೇಡ!

ಇಂದಿಗೂ ಕೂಡ ಅದೇ ಚಾರ್ಮ್ ಉಳಿಸಿಕೊಂಡು ಬಂದಿರುವ ಶ್ರೀದೇವಿಯವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.

Kannada Kanchana Ganga Cinema Fame Sridevi Vijaykumar Interesting Facts

Our Whatsapp Channel is Live Now 👇

Whatsapp Channel

Related Stories