ಯಾರನ್ನು ದ್ವೇಷಿಸದ ಕಿಚ್ಚನಿಗೆ ವಿಷ್ಣುವರ್ಧನ್ ಅವರ ಮೇಲೆ ಆ ಒಂದು ವಿಚಾರಕ್ಕೆ ಕಣ್ಣು ಕೆಂಪಾಗುವಷ್ಟು ಕೋಪ! ಆ ವಿಚಾರವೇನು ಗೊತ್ತಾ?
ಅದೆಷ್ಟೋ ಕಡೆಗಳಲ್ಲಿ ನನ್ನ ಸಿನಿಮಾ ರಂಗದ ಗಾಡ್ ಫಾದರ್ ವಿಷ್ಣುವರ್ಧನ್ ಎಂದು ಕಿಚ್ಚ ಸುದೀಪ್ ಹೇಳಿದ್ದಂಟು. ಅಷ್ಟರ ಮಟ್ಟಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ರನ್ನು ಪ್ರೀತಿಸುತ್ತಿದ್ದರು, ಆರಾಧಿಸುತ್ತಿದ್ದರು.
Kiccha Sudeep: ಸ್ನೇಹಿತರೆ ಕನ್ನಡ ಸಿನಿಮಾ ರಂಗ (Kannada Cinema Industry) ಕಂಡಂತಹ ಮೇರು ನಟರಲ್ಲಿ ಡಾ. ವಿಷ್ಣುವರ್ಧನ್ (Dr Vishnuvardhan) ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ತಮ್ಮ ಅಮೋಘ ಅಭಿನಯದ ಮೂಲಕ ಸ್ಯಾಂಡಲ್ವುಡ್ ನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮೈಲುಗಳನ್ನು ಹಾಕಿದಂತಹ ಮಹಾನ್ ಕಲಾವಿದ.
ಇಂದಿಗೂ ಕೂಡ ಡಾಕ್ಟರ್ ವಿಷ್ಣುವರ್ಧನ್ ಅವರು ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಅವರ ಅಭಿಮಾನಿ ಬಳಗ ಬಹಳಷ್ಟು ದೊಡ್ಡದು, ಅವರ ಹುಟ್ಟುಹಬ್ಬ ಬಂತೆಂದರೆ ಸಾಕು ಅವರ ಹೆಸರಿನಲ್ಲಿ ಕಾರ್ಯಕ್ರಮಗಳು, ಅನ್ನದಾನ ಸೇರಿದಂತೆ ಅವರ ನೆನಪಿನಲ್ಲಿ ನಾನಾ ತರಹದ ಚಟುವಟಿಕೆಗಳು ನಡೆಯುತ್ತವೆ.
ಡಾ ರಾಜಕುಮಾರ್ ಬಿಟ್ರೆ ಅತೀ ಹೆಚ್ಚು ಫ್ಯಾನ್ ಬೇಸ್ ಇರೋದು ನಿಮಗೆ ಎಂದಾಗ ನಟ ದರ್ಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಈಗಲೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣುವರ್ಧನ್ ಅವರ ಕುರಿತು ಸಾಕಷ್ಟು ವಿಚಾರಗಳು ಹರಿದಾಡುತ್ತಲೆ ಇರುತ್ತದೆ. ಈ ನಡುವೆ ವಿಷ್ಣುವರ್ಧನ್ ಮಾಡಿದಂತಹ ಆ ಒಂದು ಕೆಲಸ Kiccha Sudeep ಅವರಿಗೆ ಸಿಟ್ಟನ್ನು ತರಿಸಿತ್ತಂತೆ. ಅಷ್ಟಕ್ಕೂ ದಾದಾ ಅಂತದೆನನ್ನು ಮಾಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ದಿವಂಗತ ವಿಷ್ಣುವರ್ಧನ್ ಹಾಗೂ ಕಿಚ್ಚ ಸುದೀಪ್ ಬಹಳನೇ ಆತ್ಮೀಯವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಅದೆಷ್ಟೋ ಕಡೆಗಳಲ್ಲಿ ನನ್ನ ಸಿನಿಮಾ ರಂಗದ ಗಾಡ್ ಫಾದರ್ ವಿಷ್ಣುವರ್ಧನ್ ಎಂದು ಕಿಚ್ಚ ಸುದೀಪ್ ಹೇಳಿದ್ದಂಟು. ಅಷ್ಟರ ಮಟ್ಟಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ರನ್ನು ಪ್ರೀತಿಸುತ್ತಿದ್ದರು, ಆರಾಧಿಸುತ್ತಿದ್ದರು.
ಅದರಂತೆ ವಿಷ್ಣು ದಾದಾ ಕೂಡ ಸುದೀಪ್ ಅವರನ್ನು ತಮ್ಮ ಸ್ವಂತ ಮಗನಂತೆ ಪ್ರೀತಿ ತೋರಿಸಿದ್ದರು. ಹೀಗಿರುವಾಗ ಸಂದರ್ಶನ ಒಂದರಲ್ಲಿ ಸುದೀಪ್ ಅವರು “ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆಯೋ ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಅಷ್ಟೇ ಕೋಪ ಕೂಡ ಇದೆ…
ನೀವಿಲ್ಲದೆ ಅನಾಥರಾಗಿದ್ದೇವೆ. ಬಹಳ ಬೇಗ ಹೋಗಿ ಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತು ನನಗೆ ಗೊತ್ತಿಲ್ಲ ಆದರೆ ನಿಮ್ಮ ಅಗತ್ಯ ನನಗೆ ತುಂಬಾ ಇತ್ತು, ನಿಮ್ಮನ್ನು ನೆನೆಯುವ ಪ್ರೀತಿಸುವ ಅಭಿಮಾನಿಯಲೋಬ್ಬ ನಾನು” ಎಂದು ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಅಗಲಿಕೆಯ ಕುರಿತು ಬೇಸರ ವ್ಯಕ್ತಪಡಿಸಿದ್ದರು.
ಹೌದು ಸ್ನೇಹಿತರೆ ಗೊತ್ತಿರುವ ಹಾಗೆ ಕಿಚ್ಚ ಸುದೀಪ್ ಅವರ ಪ್ರತಿಯೊಂದು ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಕುರಿತು ಮಾತನಾಡದೆ ಸಂದರ್ಶನವನ್ನು ಮುಗಿಸುವುದಿಲ್ಲ.
ಪ್ರತಿಯೊಂದು ಕೆಲಸದಲ್ಲಿಯೂ ವಿಷ್ಣು ದಾದಾ ನನ್ನು ನೆನೆಯುತ್ತಾ ಅವರು ಹಾಕಿಕೊಟ್ಟಂತಹ ಹಾದಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆದುಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಅವರಷ್ಟೇ ಸರಳತೆ ನಮ್ರತೆಯ ಗುಣವನ್ನು ಹೊಂದಿರುವ ಕಿಚ್ಚ ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ ಹಾಗೂ ಅಷ್ಟೇ ಅಪಾರ ಅಭಿಮಾನ ಒಳಗೆ ಸಂಪಾದಿಸಿಕೊಂಡಿದ್ದಾರೆ.
ಇದರ ಜೊತೆ ಜೊತೆಗೆ ಕೋಟಿಗೊಬ್ಬ ವಿಷ್ಣುವರ್ಧನದಂತಹ ಹೆಸರಿನ ಸಿನಿಮಾಗಳನ್ನು ಮಾಡುವ ಮೂಲಕ ತನ್ನ ಆರಾಧ್ಯ ದೈವನಿಗೆ ಕಿಚ್ಚ ಸುದೀಪ್ ಗೌರವ ಸೂಚಿಸುತ್ತಾರೆ. ಅಲ್ಲದೆ ವಿಷ್ಣುವರ್ಧನ್ ಕುರಿತು ಯಾವುದೇ ಅವಹೇಳನಕಾರಿ ಹೇಳಿಕೆಗಳು ಬಂದರೆ ಕಿಚ್ಚ ಎಂದಿಗೂ ಸುಮ್ಮನೆ ಇರುವುದಿಲ್ಲ ಬದಲಿಗೆ ಸಾಮಾಜಿಕ ಜಾಲತಾಣಗಳ ಹಾಗೂ ಸಂದರ್ಶನಗಳ ಮೂಲಕ ಕಿ-ಡಿಗೇಡಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
Kiccha Sudeep anger About Dr Vishnuvardhan for That one Reason
Follow us On
Google News |