ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಿದ್ದ ಅಪ್ಪು ಒಂದು ಕಂಡಿಶನ್ ಹಾಕ್ತಿದ್ರಂತೆ, ಅಷ್ಟಕ್ಕೂ ಪುನೀತ್ ಅವರ ಆ ಕಂಡೀಶನ್ ಏನು ಗೊತ್ತಾ?

ಬದುಕಿದಷ್ಟು ದಿನ ತಾವು ಮಾಡಿದಂತಹ ಅಷ್ಟು ಸಹಾಯ, ದಾನ ಧರ್ಮದ ಕಾರ್ಯಗಳನ್ನು ಎಲ್ಲಿಯೂ ರಿವೀಲ್ ಆಗದಂತೆ ಗೌಪ್ಯವಾಗಿ ನೋಡಿಕೊಂಡು ಬಂದಂತಹ ಪುನೀತ್ ರಾಜಕುಮಾರ್ ಕಷ್ಟ ಎಂದು ಬೇಡಿ ಬಂದವರಿಗೆ ನಿಸ್ವಾರ್ಥ ಮನಸ್ಸಿನಿಂದ ಸಹಾಯ ಮಾಡಿ ಕಂಡಿಶನ್ ಒಂದನ್ನು ಹಾಕುತ್ತಿದ್ದರಂತೆ.

ಕರ್ನಾಟಕ ರತ್ನ, ಕನ್ನಡಿಗರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ಅವರನ್ನು ಅಭಿಮಾನಿಗಳು ಎಂದಾದರೂ ಮರೆಯಲು ಸಾಧ್ಯವೇ? ಭೌತಿಕವಾಗಿ ಇಂದು ಅಪ್ಪು ನಮ್ಮೊಂದಿಗೆ ಇಲ್ಲವಾದರೂ ಅವರು ಮಾಡಿರುವಂತಹ ಸಮಾಜ ಸೇವೆ ಸನ್ಮಾರ್ಗದ ಹಾದಿ ಎಲ್ಲವೂ ಪ್ರತಿಯೊಬ್ಬ ಅಭಿಮಾನಿಗಳಿಗೂ ಸ್ಪೂರ್ತಿದಾಯಕವಾಗಿದೆ.

ಹೀಗೆ ನಟ ಪುನೀತ್ ರಾಜಕುಮಾರ್ ಅವರು ನಮ್ಮಿಂದಗಲಿ ಬರೋಬ್ಬರಿ ಎರಡುವರೆ ವರ್ಷಗಳು ಕಳೆಯುತ್ತಾ ಬರುತ್ತಿದೆ. ಆದರೂ ಕೂಡ ಅಪ್ಪು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಇಂದಿಗೂ ಅದೆಷ್ಟೋ ಅಭಿಮಾನಿಗಳಿಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.

ಬದುಕಿದಷ್ಟು ದಿನ ತಾವು ಮಾಡಿದಂತಹ ಅಷ್ಟು ಸಹಾಯ, ದಾನ ಧರ್ಮದ ಕಾರ್ಯಗಳನ್ನು ಎಲ್ಲಿಯೂ ರಿವೀಲ್ ಆಗದಂತೆ ಗೌಪ್ಯವಾಗಿ ನೋಡಿಕೊಂಡು ಬಂದಂತಹ ಪುನೀತ್ ರಾಜಕುಮಾರ್ ಕಷ್ಟ ಎಂದು ಬೇಡಿ ಬಂದವರಿಗೆ ನಿಸ್ವಾರ್ಥ ಮನಸ್ಸಿನಿಂದ ಸಹಾಯ ಮಾಡಿ ಕಂಡಿಶನ್ ಒಂದನ್ನು ಹಾಕುತ್ತಿದ್ದರಂತೆ.

ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಿದ್ದ ಅಪ್ಪು ಒಂದು ಕಂಡಿಶನ್ ಹಾಕ್ತಿದ್ರಂತೆ, ಅಷ್ಟಕ್ಕೂ ಪುನೀತ್ ಅವರ ಆ ಕಂಡೀಶನ್ ಏನು ಗೊತ್ತಾ? - Kannada News

ಭಾರೀ ಸದ್ದು ಮಾಡಿದ್ದ ತಿಥಿ ಸಿನಿಮಾದ ಬಜೆಟ್ ಎಷ್ಟು? ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದ ಗಡ್ದಪ್ಪ, ಸೆಂಚುರಿ ಗೌಡಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

ಅಷ್ಟಕ್ಕೂ ಅಪ್ಪು ಬಡವರಿಂದ ಅಪೇಕ್ಷಿಸುತ್ತಿದ್ದಿದ್ದು ಏನನ್ನು? ಅದೆಂಥಾ ಕಂಡೀಶನ್ ಹಾಕಿದ್ರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಪುನೀತ್ ರಾಜಕುಮಾರ್ ಅಗಲಿದ ದಿನದಿಂದ ಹಿಡಿದು ಇಂದಿನವರೆಗೂ ಅಪ್ಪು ಬದುಕಿದ್ದಷ್ಟು ದಿನ ಮಾಡುತ್ತಿದ್ದಂತಹ ಮಹತ್ಕಾರ್ಯಗಳ ವಿಚಾರ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಲೆ ಇದೆ.

Actor Puneeth Rajkumarಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ತಮ್ಮ ಸಂಭಾವನೆಯಲ್ಲಿ ಅರ್ಧದಷ್ಟು ಹಣವನ್ನು ಮುಡಿಪಾಗಿಡುತ್ತಿದ್ದರು. ಅಲ್ಲದೆ ಕಷ್ಟ ಎಂದು ಮನೆಯ ಬಳಿ ಬೇಡಿ ಬಂದವರಿಗೆ ಎಂದೂ ಬರಿಗೈಯಲ್ಲಿ ಕಳಿಸುತ್ತಿದ್ದವರಲ್ಲ, ಇಂತಹ ನಟ ಇಷ್ಟೆಲ್ಲಾ ಸಹಾಯ ಮಾಡಿದರು ಕಿಂಚಿತ್ತು ಪ್ರಚಾರವನ್ನು ಅಪೇಕ್ಷಿಸುತ್ತಿರಲಿಲ್ಲ. ಹೌದು ಗೆಳೆಯರೇ ಎಲ್ಲರೂ ನೋಡುವ ಹಾಗೆ ಸಹಾಯ ಮಾಡುತ್ತಿರಲಿಲ್ಲ, ಸಹಾಯ ಮಾಡಿ ಪ್ರತಿಯಾಗಿ ಯಾವುದೇ ಸೇವೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ.

ನಟ ರವಿಚಂದ್ರನ್ ದ್ವಿಪಾತ್ರದಲ್ಲಿ ನಟಿಸಿದ್ದ ಶ್ರೀರಾಮಚಂದ್ರ ಸಿನಿಮಾ ನಟಿ ಮೋಹಿನಿ ಈಗ ಹೇಗಾಗಿದ್ದಾರೆ? ಎಲ್ಲಿದ್ದಾರೆ ಗೊತ್ತಾ?

ಅಷ್ಟೇ ಅಲ್ಲದೆ ಸಿನಿಮಾ ಸೆಟ್ನಲ್ಲಿ ಯಾವುದಾದರು ಅಭಿಮಾನಿಗಳು ಕಷ್ಟದಲ್ಲಿದ್ದಾರೆ ಎಂಬ ವಿಚಾರ ತಿಳಿದರೆ ಅವರನ್ನು ಯಾರು ಇಲ್ಲದಂತಹ ಸ್ಥಳವೊಂದಕ್ಕೆ ಕರೆದು ಅವರ ಕಷ್ಟವನ್ನು ಕೇಳಿ ಅದಕ್ಕೆ ತಮ್ಮ ಕೈಲಾದಂತಹ ಸಹಾಯ ಮಾಡುತ್ತಿದ್ದ ಕನ್ನಡ ಸಿನಿಮಾ (Kannada Cinema Industry) ರಂಗದ ಕರ್ಣ.

ಇನ್ನು ಅದೆಷ್ಟೋ ಸಂದರ್ಭಗಳಲ್ಲಿ ಪುನೀತ್ ರಾಜಕುಮಾರ್ ಅವರು ಕಷ್ಟದಲ್ಲಿರುವವರಿಗೆ ಕರೆ ಮಾಡಿ ಮನೆ ಬಳಿ ಕರೆಸಿಕೊಂಡು ಯಾರು ಇಲ್ಲದಂತಹ ಸಮಯ ನೋಡಿ ಅವರಿಗೆ ಸಹಾಯ ಹಸ್ತ ಚಾಚುತ್ತಿದ್ದರು.

Kannada Actor Puneeth Rajkumarಇಷ್ಟೆಲ್ಲ ಒಳ್ಳೆ ಕೆಲಸಗಳನ್ನು ಮಾಡುತ್ತಾ ಬಂದಿರುವ ಅಪ್ಪು ಎಂದಿಗೂ ಪ್ರಚಾರವನ್ನು ಅಪೇಕ್ಷಿಸುತ್ತಿರಲಿಲ್ಲ. ಹೌದು ಗೆಳೆಯರೇ ಈ ಕಾಲದಲ್ಲಿ ಎರಡು ಆಪಲ್ ಒಂದು ಪೌಂಡ್ ಬ್ರೆಡ್ ಅನ್ನು ಹಸಿದವರಿಗೆ ಕೊಟ್ಟರೆ ಅದನ್ನು ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಇನ್ನಿತರೆ ಜಾಗಗಳಲ್ಲಿ ಹಾಕಿಕೊಳ್ಳುವ ಸೆಲೆಬ್ರೆಟಿಗಳನ್ನು ನಾವು ನೋಡಿದ್ದೇವೆ.

ನಿಜಕ್ಕೂ ರಶ್ಮಿಕಾ ಮಂದಣ್ಣಗೆ ಕನ್ನಡ ಮಾತಾಡೋಕೆ ಬರಲ್ವಾ? ಇಲ್ಲ ಎಲ್ಲಾ ಗೊತ್ತಿದ್ದು ಡ್ರಾಮಾ ಮಾಡ್ತಿದ್ದಾರಾ ಎಂದ ನೆಟ್ಟಿಗರು!

ಆದರೆ ಅಪ್ಪು ತಮ್ಮ ಅರ್ಧದಷ್ಟು ಆಸ್ತಿಯನ್ನು ಬಡವರಿಗಾಗಿ ಮುಡಿಪಾಗಿಟ್ಟರು ಕೂಡ ಅದರ ಸಣ್ಣ ಮಾಹಿತಿಯು ಇತರರಿಗೆ ಗೊತ್ತಾಗದಂತೆ ಗೌಪ್ಯತೆ ಕಾಯ್ದುಕೊಂಡಿದ್ದರು.

ಅಷ್ಟೇ ಅಲ್ಲದೆ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಶ್ವಿನಿ ಹಾಗೂ ಶಿವಣ್ಣನಿಗೆ ಈ ವಿಚಾರ ತಿಳಿದಿರಲಿಲ್ಲ, ಸಹಾಯ ಪಡೆದಿದ್ದಂತಹ ಜನರು ಕೂಡ ಅಪ್ಪು ಬದುಕಿದಷ್ಟು ದಿನ ಈ ಮಾಹಿತಿಯನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಸ್ವತಃ ಪುನೀತ್ ರಾಜಕುಮಾರ್ ಅವರ ಈ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಕೂಡದು ಎಂದು ಭಾಷೆ ತೆಗೆದುಕೊಳ್ಳುತ್ತಿದ್ದರಂತೆ. ಇಂತಹ ಮಹಾನ್ ನಟನನ್ನು ಕಳೆದುಕೊಂಡ ಸಿನಿಮಾ ರಂಗ (Kannada Film Industry) ಅನಾಥವೇ ಸರಿ.

Unknow Interesting Facts About Kannada Actor Puneeth Rajkumar Social Service

Follow us On

FaceBook Google News

Unknow Interesting Facts About Kannada Actor Puneeth Rajkumar Social Service