ಕೈಮುಗಿತೀನಿ ನನ್ನನ್ನು ಉಳಿಸಿಕೊ ಎಂದು ನಟಿ ಮಂಜುಳಾ ಆ ನಟನ ಬಳಿ ಅಂಗಲಾಚಿ ಬೇಡಿಕೊಂಡರಂತೆ! ಅಷ್ಟಕ್ಕೂ ಆ ಸ್ಟಾರ್ ನಟ ಯಾರು ಗೊತ್ತಾ?
ಮಂಜುಳಾ ಮತ್ತು ಆ ನಾಯಕ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ತೆರೆ ಯಾಚೆಗೆ ಇವರಿಬ್ಬರದ್ದು ಅಪೂರ್ವವಾದ ಸಂಬಂಧ, ವಾತ್ಸಲ್ಯದ ಅನುಬಂಧ ಬಾಂಧವ್ಯದ, ಸೇತುಬಂಧ.
ಕನ್ನಡ ಸಿನಿಮಾ ರಂಗದ (Kannada Film Industry) ಬಾಯಿ ಬಡಕಿ ಬಜಾರಿ ಎಂದೇ ಪ್ರಖ್ಯಾತಿ ಪಡೆದಿದ್ದ ಸಂಪತ್ತಿಗೆ ಸವಾಲ್ ಖ್ಯಾತಿಯ ನಟಿ ಮಂಜುಳ (Actress Manjula) ಅವರು ಕೇವಲ 32ನೇ ವಯಸ್ಸಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಎಂದಿಗೂ ಅದೆಷ್ಟೋ ಕನ್ನಡಿಗರ ಮನಸ್ಸಿನಲ್ಲಿ ಹಾರದ ನೋವನ್ನು ಮೂಡಿಸಿದೆ.
ಇಂತಹ ಅದ್ಭುತ ನಟಿ ಸಾಯುವ ಕೊನೆಯ ಗಳಿಗೆಯಲ್ಲಿ ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ ಕೈಮುಗಿತಿನಿ ನನ್ನನ್ನು ಉಳಿಸಿಕೊ ಎಂದು ಅಂಗಲಾಚಿ ಬೇಡಿಕೊಂಡರಂತೆ.
ಅಷ್ಟಕ್ಕೂ ಆ ನಟ ಯಾರು? ಆತ ಮಾಡಿದ್ದೇನು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಮಂಜುಳಾ ಮತ್ತು ಆ ನಾಯಕ ಸಾಕಷ್ಟು ಸಿನಿಮಾಗಳಲ್ಲಿ (Kannada Movies) ಒಟ್ಟಿಗೆ ಅಭಿನಯಿಸಿದ್ದರು. ತೆರೆ ಯಾಚೆಗೆ ಇವರಿಬ್ಬರದ್ದು ಅಪೂರ್ವವಾದ ಸಂಬಂಧ, ವಾತ್ಸಲ್ಯದ ಅನುಬಂಧ ಬಾಂಧವ್ಯದ, ಸೇತುಬಂಧ.
ಹಾಗೆ ನೋಡಿದರೆ ಮಂಜುಳಾ ಅವರು ಆ ನಾಯಕನನ್ನು ಕರೆಯುತ್ತಿದ್ದಿದ್ದು ಅಣ್ಣ ಎಂದು. ಅಣ್ಣ ತಂಗಿಯರ ನಡುವೆ ಅದೆಂತಹ ಬಾಂಧವ್ಯ ವಿಹುದೋ ಅಂತಹ ನಿಷ್ಕಲ್ಮಶವಾದ ಪ್ರೀತಿ ಗೌರವ ಹಾಗೂ ಕಾಳಜಿ ಈ ಇಬ್ಬರ ನಡುವೆಯೂ ಅಘಾತವಾಗಿತ್ತು.
ಹಾಗೆ ನೋಡಿದರೆ ಮಂಜುಳಾ ಅವರ ಕೊನೆಯ ಕ್ಷಣದವರೆಗೂ ಅವರನ್ನು ಕಣ್ಣಂಚಿನಲ್ಲಿ ನೋಡಿಕೊಂಡಿದ್ದು, ಅವರನ್ನು ಬದುಕಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡಿದ್ದು, ದೇವರೇ ಈಕೆಗೆ ಇಂತಹ ಸಾವನ್ನು ಯಾಕೆ ನೀಡುತ್ತಿದ್ದೀಯ? ದಯವಿಟ್ಟು ಅವಳನ್ನು ಉಳಿಸಿಕೊಡು ಎಂದು ಬೇಡಿಕೊಂಡದ್ದು ಮತ್ತೆ ಯಾರು ಅಲ್ಲ ಅವರೇ ಪ್ರಣಯ ರಾಜ ಶ್ರೀನಾಥ್ (Actor Srinath).
ಹೌದು ಗೆಳೆಯರೇ, ಶ್ರೀನಾಥ್ ಹಾಗೂ ಮಂಜುಳಾ (Actress Manjula) ನಟಿಸಿರುವಂತಹ ಸಿನಿಮಾಗಳು ಒಂದ, ಎರಡ? ಇವರಿಬ್ಬರೂ ಅಭಿನಯಿಸಿರುವಂತಹ ಸಿನಿಮಾಗಳು ಇಂದಿಗೂ ಜನರು ಬಹಳನೇ ಇಷ್ಟಪಟ್ಟು ನೋಡುವಂತದ್ದು ಹಾಗೂ ಮತ್ತೆ ನೋಡಿದರೂ ಮಗದೊಮ್ಮೆ ನೋಡಬೇಕೆನಿಸುವಂಥದ್ದು..
ಇವರಿಬ್ಬರ ಸಾಲು ಸಾಲು ಸಿನಿಮಾಗಳು ಸಾಮಾಜಿಕ ಕಳಕಳಿ ಹಾಗೂ ಪ್ರೇಮ ಕಥೆಯದ್ದೆ ಹೆಚ್ಚಾಗಿರುತ್ತಿದ್ದವು. ಶ್ರೀನಾಥ್ ಅವರಿಗೆ ಮಂಜುಳ ಅವರ ಮೇಲೆ ಎಲ್ಲಿಲದಂತಹ ಪ್ರೀತಿ ಮೂಡಲು ಮುಖ್ಯ ಕಾರಣ ಅವರ ಸರಳತೆ ಮುಗ್ದತೆ ಹಾಗೂ ಅವರು ಶ್ರೀನಾಥ್ ಅವರನ್ನು ನಡೆಸಿಕೊಳ್ಳುತ್ತಿದ್ದಂತಹ ರೀತಿ, ಬಾಯಿ ತುಂಬಾ ಅಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದಂತಹ ಪರಿ ಶ್ರೀನಾಥ್ ಅವರಿಗೆ ಬಹಳಾನೇ ಇಷ್ಟವಾಗುತ್ತಿತ್ತು.
ಮಂಜುಳ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಕೂಡ ಮೊದಲಿಗೆ ಶ್ರೀನಾಥ್ ಅವರ ಬಳಿ ಕೇಳಿ ಆನಂತರ ಅದರ ಕುರಿತು ಚರ್ಚಿಸಿ ಯೋಚನೆ ಮಾಡಿ ನಿಕಟವಾದ ನಿರ್ಧಾರಕ್ಕೆ ಬರುತ್ತಿದ್ದರು.
ಇಷ್ಟರ ಮಟ್ಟಿಗೆ ಇವರಿಬ್ಬರ ಭಾಂದವ್ಯ ಬೆಳೆದಿತ್ತು. ಹೀಗಿರುವಾಗ ಅದೊಂದು ಕರಾಳ ದಿನದಂದು ಮಂಜುಳಾ ಅವರನ್ನು ಹಾಸಿಗೆಯ ಮೇಲೆ ದೇಹ ಪೂರ್ತಿ ಸುಟ್ಟ ಗಾಯಗಳಿಂದ ನೋಡುತ್ತಿನಿ ಎಂದು ಶ್ರೀನಾಥ್ ಅವರು ಕನಸಿನಲ್ಲಿಯೂ ಊಹಿಸಿರಲಿಲ್ಲ.
ಆಕೆ ಇಷ್ಟು ಬೇಗ ತನ್ನಿಂದ ಅಗಲುತ್ತಾರೆ ಎಂಬ ಸಣ್ಣ ಸೂಚನೆಯೂ ಇರಲಿಲ್ಲ. ಹೀಗೆ ಮಂಜುಳಾ ಅವರು ಈ ರೀತಿ ತಪ್ಪು ನಿರ್ಧಾರ ತೆಗೆದುಕೊಂಡಂತಹ ವಿಚಾರ ಹೊರ ಬರುತ್ತಿದ್ದ ಹಾಗೆ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಗುತ್ತದೆ.
ಈ ಮಾಹಿತಿ ತಿಳಿದೊಡನೆ ಶ್ರೀನಾಥ್ ಅವರು ಕೂಡ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಹೀಗೆ ಮಂಜುಳಾ ಅವರ ಬಳಿ ಹೋಗಿ ಆದಂತಹ ಘಟನೆಗಳ ಕುರಿತು ಮಾತನಾಡಿದ ಶ್ರೀನಾಥ್ ಅವರ ಬಳಿ ಮಂಜುಳಾ ಅವರು ಅಣ್ಣ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಅಲ್ವಾ? ನಾನು ಬದುಕುತ್ತೇನಾ? ನನಗೆ ಇಷ್ಟು ಬೇಗ ಸಾಯಲು ಇಷ್ಟ ಇಲ್ಲ ಕಣೋ ಕೈ ಮುಗಿತೀನಿ ನನ್ನನ್ನು ಉಳಿಸಿಕೊ ಎಂದರಂತೆ…
52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ನಾನು ಮತ್ತೆ ನಿನ್ನ ಜೊತೆ ನಟಿಸಬೇಕು ಎಂದಲ್ಲ ಮಂಜುಳಾ ಅಳುತ್ತಾ ಕೇಳಿಕೊಳ್ಳುತ್ತಾರೆ. ಆಗ ಶ್ರೀನಾಥ್ ಅವರಿಗೆ ಕರುಳು ಹಿಂಡಿದಂತಾಗುತ್ತದೆ. ಆದರೂ ಸಹ ಸಮಾಧಾನದ ಧ್ವನಿಯಲ್ಲಿ ‘ಖಂಡಿತ ನೀನು ಮತ್ತೆ ಚೆನ್ನಾಗಿ ಆಗುತ್ತೀಯ, ನನ್ನ ಜೊತೆ ಇನ್ನು ಹೆಚ್ಚು ಸಿನಿಮಾಗಳಲ್ಲಿ ನೀನು ಅಭಿನಯಿಸಲೇಬೇಕು, ಹೆದರಬೇಡ ಬೇಗ ಚೇತರಿಸಿಕೋ’ ಎನ್ನುತ್ತಾರೆ. ಆದರೂ ಕೂಡ ವಿಧಿಯ ಆಟವೇ ಬೇರೆಯಾಗಿತ್ತು, ಮಂಜುಳಾ ವಿಧಿಯ ಮುಂದೆ ಮಣಿದು ಹೋದರು.
Unknown Facts about Kannada Actress Manjula and Actor Srinath