ರೈತರಿಗೆ ಸಿಹಿ ಸುದ್ದಿ! 19 ಲಕ್ಷ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ; ಖಾತೆ ಚೆಕ್ ಮಾಡಿಕೊಳ್ಳಿ
ದೇಶದಲ್ಲಿ ರೈತ (farmers ) ಸುರಕ್ಷಿತವಾಗಿ ಇದ್ರೆ, ಆತ ಬೆಳೆಯುವ ಬೆಳೆಗೆ, ಆತನಿಗೆ ಸರಿಯಾದ ನ್ಯಾಯವನ್ನು ಒದಗಿಸಿದರೆ ದೇಶವು ಕೂಡ ಸುಭಿಕ್ಷ ವಾಗಿರುತ್ತದೆ ಎಂದರೆ ಅತಿಶಯೋಕ್ತಿ ಏನು ಅಲ್ಲ.
ಎಷ್ಟೊಂದು ಜನ ಕೃಷಿ ಚಟುವಟಿಕೆ (agriculture activities) ಯನ್ನು ಮಾಡಿಕೊಂಡು ಬರುತ್ತಾರೆ, ತಮ್ಮ ಗದ್ದೆ ಹೊಲಗಳಲ್ಲಿ ಹಗಲಿರುಳು ದುಡಿಯುತ್ತಾರೆ. ಇಂತಹ ರೈತರಿಗೆ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸಿ ಕೊಡುವುದು ಸರ್ಕಾರಗಳ ಕರ್ತವ್ಯ, ಅದು ಕೇಂದ್ರ ಸರ್ಕಾರವಾಗಿರಲಿ ಅಥವಾ ರಾಜ್ಯ ಸರ್ಕಾರವಾಗಿರಲಿ.
ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಗೆ ಇನ್ನೂ ಬರದಿದ್ರೆ ಈ ರೀತಿ ಮಾಡಿ
ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಇತ್ತೀಚಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೂಡ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿವೆ. ಇದೆಲ್ಲದರ ಜೊತೆಗೆ ರೈತರಿಗೆ ಕೋಟಿ ಹಣವನ್ನು ಬೆಳೆ ವಿಮೆ ಪರಿಹಾರವಾಗಿ ಸರ್ಕಾರ ಮೀಸಲಿಟ್ಟಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.
19 ಲಕ್ಷ ರೈತರಿಗೆ ಸಿಗಲಿದೆ ಬೆಳೆ ವಿಮೆ (Crop Insurance for farmers)
ರಾಜ್ಯ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಇತ್ತೀಚಿಗೆ ರೈತರಿಗೆ ಸಿಗಲಿರುವ ಬೆಳೆ ವಿಮೆ ಬಗ್ಗೆ ಮಾತನಾಡಿದ್ದಾರೆ. ಇದೇ ಬರುವ ಮಾರ್ಚ್ 31 2024, ಸುಮಾರು 13 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಪ್ರೋತ್ಸಾಹ ಧನ ಜಮಾ ಆಗಲಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (Pradhanmantri fasal Bima scheme)
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ, 8 ಲಕ್ಷ ರೈತರಿಗೆ ಸುಮಾರು 600 ಕೋಟಿಗಳನ್ನು ಬೆಳೆ ವಿಮೆ ಪರಿಹಾರವಾಗಿ ಒದಗಿಸಲಾಗಿದೆ. ಈ ಬೆಳೆ ವಿಮೆ ಗೆ ನೀವು ಅರ್ಜಿ ಸಲ್ಲಿಸಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ ಎನ್ನುವುದನ್ನು ಚೆಕ್ ಮಾಡಬಹುದು.
ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ; ಹೊಸ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್
ಬೆಳವಿಮೆ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ!
ಈ ಬಾರಿ ಮಳೆಯ ಆಭಾವ ಎಲ್ಲಾ ಕಡೆ ಎದ್ದು ಕಾಣುತ್ತಿದೆ. ಜೊತೆಗೆ ಸಾಕಷ್ಟು ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಮುಖ್ಯವಾಗಿ ಹೇಳಬೇಕು ಅಂದ್ರೆ ರೈತರು ತಮ್ಮ ಜಮೀನಿಗೆ ಸರಿಯಾಗಿ ನೀರು ಉಣಿಸಲು ಸಾಧ್ಯವಾಗುತ್ತಿಲ್ಲ. ನೀರು ಬಹಳ ಕಡಿಮೆ ಇರುವ ಕಾರಣ ರೈತರು ತಮ್ಮ ಹೊಲಗಳಿಗೆ ನೀರು ಹಾಯಿಸುವುದು ಕೂಡ ಕಷ್ಟವಾಗುತ್ತಿದೆ ಹೀಗಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೆಲವು ಜಿಲ್ಲೆಗಳ ಕೆಲವು ಪ್ಲೇಸ್ ಗಳಲ್ಲಿ ಬೆಳೆ ಪರಿಹಾರವನ್ನ ನೀಡಿವೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ, ರೈತರಿಗೆ ಇದರ ಪ್ರಯೋಜನ ಸಿಗಲಿದೆ. ನೀವು ಬೆಳೆ ವಿಮೆ ಮಾಡಿಸಿಕೊಂಡಿದ್ದರೆ, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದರೆ ಸರ್ಕಾರದಿಂದ ಪರಿಹಾರ ಪಡೆಯಬಹುದು.
ಬೆಳೆ ವಿಮೆ ಯಾರು ಪಡೆದುಕೊಳ್ಳಬಹುದು?
ಬೆಳೆ ವಿಮೆ ಸದ್ಯ ಆರಂಭವಾಗಿದ್ದು, ಫಲಾನುಭವಿಗಳಿಗೆ ಶೇಕಡ 75% ನಷ್ಟು ಪರಿಹಾರವನ್ನು ನೀಡಲಾಗಿದೆ. ನಿಮ್ಮ ಆದಾಯದ ಮೊತ್ತದ ಆಧಾರದ ಮೇಲೆ ನೀವು ಪರಿಹಾರ ನಿಧಿಯನ್ನು ಪಡೆದುಕೊಳ್ಳಬಹುದು.
ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್; ಈ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ!
ಬೆಳೆ ವಿಮೆ ನಿಮ್ಮ ಖಾತೆಗೆ ಜಮಾ ಆಗಿದ್ಯಾ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?
ಇದಕ್ಕಾಗಿ ಮೊದಲು https://samrakshane.karnataka.gov.in/ ಎನ್ನುವ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮಗೆ ವಿಮೆ ಚೆಕ್ ಮಾಡುವ ಆಯ್ಕೆ ಕಾಣಿಸುತ್ತದೆ.
Select insurance year 2022- 23 ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ನೀವು ಬೆಳೆ ವಿಮೆ ಗುರುತು ಆಯ್ಕೆ ಮಾಡಿಕೊಳ್ಳಬೇಕು ಅಲ್ಲಿ kharif ಎಂದು ಆಯ್ಕೆ ಮಾಡಿಕೊಳ್ಳಿ.
ಈಗ ಗೋ ಎಂದು ಕ್ಲಿಕ್ ಮಾಡಿ ಮತ್ತೊಂದು ಹೊಸ ಫೋಟೋ ತೆಗೆದುಕೊಳ್ಳುತ್ತದೆ.
ಈಗ ನೀವು ಬೆಳೆ ವಿಮೆ ಎಲ್ಲಿ ನಿಮ್ಮ ಹೆಸರು ಇದೆಯಾ ಅಂತ ಚೆಕ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಪ್ರೊಪೋಸಲ್ ನಂಬರ್ ನೀಡಬೇಕು. ಬಳಿಕ ನಿಮ್ಮ ಬೆಳಗಿನ ಅರ್ಜಿ ಸಮಯದಲ್ಲಿ ಕೊಟ್ಟಿರುವ ಎಕ್ನಾಲೆಜ್ಮೆಂಟ್ ಸಂಖ್ಯೆಯನ್ನು ನಮೂದಿಸಬೇಕು. ಇದರ ಜೊತೆಗೆ ಕ್ಯಾಪ್ಚ ಕೋಡ್ ಕೂಡ ಇದ್ದ ಹಾಗೆ ಸರಿಯಾಗಿ ಫಿಲ್ ಮಾಡಬೇಕು.
ಈಗ ಮತ್ತೊಂದು ಹೊಸ ತೆಗೆದುಕೊಳ್ಳುತ್ತದೆ ಹಾಗೂ ನಿಮಗೆ ಬೆಳಗಿನ ಹಣ ಜಮಾ ಆಗಿದ್ಯೋ ಇಲ್ಲವೋ ಎನ್ನುವುದನ್ನು ಇಲ್ಲಿ ತಿಳಿಯಬಹುದು.
ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ 50% ಸಹಾಯಧನ! ಅರ್ಜಿ ಆಹ್ವಾನ
ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿನ ರೈತರಿಗೆ ಬೆಳೆ ಪರಿಹಾರವಾಗಿ ತಲಾ ಎರಡು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ.
ಒಂದು ವೇಳೆ ನೀವು ಬೆಳೆ ವಿಮೆ ಅಥವಾ ಬೆಳೆ ನಾಶ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ನಿಮ್ಮ ಖಾತೆಗೆ (Bank Account) ಹಣ ಬರಬೇಕು ಅಂದ್ರೆ ಕೆವೈಸಿ ಪ್ರಕ್ರಿಯೆ ಕೂಡ ಕಡ್ಡಾಯ ಎಂಬುದನ್ನು ಗಮನಿಸಿ.
Good news for farmers, Release of crop insurance money for 19 lakh farmers