Sandalwood News

ಪಾರ್ವತಮ್ಮನವರು ಶಿವಣ್ಣನ ಆ ಚಿತ್ರಕ್ಕೆ 13 ವರ್ಷ ವಯಸ್ಸಿನ ಸುಧಾರಾಣಿನೇ ಬೇಕೆಂದು ಹಠ ಹಿಡಿದಿದ್ದು ಯಾಕೆ? ಸುಧಾರಾಣಿ ತಂದೆತಾಯಿ ಇಂಡಸ್ಟ್ರಿಗೆ ಕಳಿಸೋದಿಲ್ಲ ಎಂದಿದ್ದೇಕೆ?

Actress Sudha Rani : ಸ್ನೇಹಿತರೆ, ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಮನೆತನ ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ಸಾಕಷ್ಟು ಸ್ಟಾರ್ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ್ದಾರೆ. ನಾವಿವತ್ತು ಕೇವಲ 13 ವರ್ಷದ ಸುಧಾರಣಿಯವರನ್ನು ಪಾರ್ವತಮ್ಮ (Parvathamma Rajkumar) ತಮ್ಮ ಮಗನ ಮೊದಲ ಸಿನಿಮಾಗೆ ನಾಯಕಿಯನ್ನಾಗಿ ಮಾಡಿಕೊಳ್ಳಲು ಹಠ ಹಿಡಿದಿದ್ದು ಯಾಕೆ?

ಅವರ ಸಂಬಂಧಿಕರೆಲ್ಲರೂ ಬೇಡ ಎಂದರು ಪಾರ್ವತಮ್ಮ ಒಪ್ಪಿಸಿದ್ದು ಹೇಗೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ತಿಳಿದುಕೊಳ್ಳುವ ಕುತೂಹಲವಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Interesting Facts About Kannada Anand Movie Fame Actress Sudha Rani

ತನ್ನ ಗಂಡನ ಎರಡನೇ ಪತ್ನಿಗೆ ಬಾಣಂತನ ಮಾಡಿದ ನಟಿ ರೇಖಾ ದಾಸ್ ಕಷ್ಟದ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಇವರ ಪತಿ ಯಾರು ಗೊತ್ತಾ?

ಹೌದು ಗೆಳೆಯರೇ ಕೇವಲ ಬಾಲ ನಟನಾಗಿ ಅಭಿನಯಿಸುತ್ತಿದ್ದಂತಹ ಶಿವರಾಜ್ ಕುಮಾರ್ (Actor Shiva Rajkumar) ಅವರ ಆನಂದ್ ಸಿನಿಮಾದ (Kannada Anand Movie) ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಂತಹ ಸಿನಿಮಾವಿದು.

ಹೀಗೆ ತಮ್ಮ ಚೊಚ್ಚಲ ಆನಂದ್ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಶಿವರಾಜ್ ಕುಮಾರ್ ಅವರಿಗೆ ಸಾಥ್ ನೀಡಿದ್ದು ಹದಿಮೂರು ವರ್ಷದ ಬಾಲನಟಿ ಸುಧಾರಾಣಿ (Actress Sudha Rani).

Kannada Actress Sudha Raniಹೌದು ಸ್ನೇಹಿತರೆ ಈ ಚಿತ್ರದಲ್ಲಿ ಸುಧಾರಣಿಯವರ ಅಭಿನಯ ಕಂಡಂತಹ ಸಾಕಷ್ಟು ವಿಮರ್ಶಕರು ನಿಜಕ್ಕೂ ಅವರಿಗೆ ಕೇವಲ 13 ವರ್ಷ ಎಂದರೆ ನಂಬಲಿಕ್ಕೆ ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಷ್ಟರಮಟ್ಟಿಗೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅದರಲ್ಲೂ ತಮ್ಮ ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಚಾಕಚಕ್ಯತೆಯನ್ನು ಕನ್ನಡ ಸಿನಿ ಪ್ರೇಕ್ಷಕರಿಗೆ ಮಾಡಿಸಿದಂತಹ ನಟಿ ಸುಧಾರಾಣಿಯವರನ್ನು ಸಿನಿಮಾ ಇಂಡಸ್ಟ್ರಿಗೆ ಕಳುಹಿಸಲು ಅವರ ಪೋಷಕರು ಹಾಗೂ ಸಂಬಂಧಿಕರು ಒಪ್ಪುವುದಿಲ್ಲ.

ಕೇವಲ 14 ವರ್ಷಕ್ಕೆ ಬಣ್ಣ ಹಚ್ಚಿದ ಚೆಲುವಿನ ಚಿತ್ತಾರ ಸಿನಿಮಾ ನಟಿ ಅಮೂಲ್ಯ ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೌದು ಸ್ನೇಹಿತರೆ ತಮ್ಮ ಮಗನ ಮೊದಲ ಸಿನಿಮಾಗೆ ಯಾರನ್ನು ನಾಯಕಿಯಾಗಿ ಹಾಕಿಕೊಳ್ಳುವುದು ಎಂದು ಪಾರ್ವತಮ್ಮ ಯೋಚಿಸುತ್ತಿರುತ್ತಾರೆ. ಅಲ್ಲದೆ ರಾಜಕುಮಾರ್, ವರದಪ್ಪ, ಚಿ ಉದಯ್ ಶಂಕರ್ ಮುಂತಾದರೆಲ್ಲರೂ ಕುಳಿತು ಚರ್ಚಿಸಿ ಸಾಕಷ್ಟು ನಟಿಯರ ಲಿಸ್ಟ್ಗಳನ್ನು ಪಾರ್ವತಮ್ಮನವರ ಮುಂದೆ ಇಟ್ಟರು.

ಪಾರ್ವತಮ್ಮ ಯಾರನ್ನು ಒಪ್ಪಿಕೊಳ್ಳಲಿಲ್ಲ ಅದಾದ ಕೆಲ ದಿನಗಳ ನಂತರ ಚಿ ಉದಯ್ ಶಂಕರ್ ಅವರ ಮನೆಯಲ್ಲಿ ನಡೆದ ಖಾಸಗಿ ಫಂಕ್ಷನ್ ಒಂದಕ್ಕೆ ಪಾರ್ವತಮ್ಮ ಭೇಟಿ ನೀಡುತ್ತಾರೆ.

ಆ ಸಂದರ್ಭದಲ್ಲಿ ಸುಧಾರಣಿಯವರನ್ನು ಕಂಡು ಆಕರ್ಷಿತರಾದ ಪಾರ್ವತಮ್ಮನವರು ನೀನು ನನ್ನ ಮಗನ ಸಿನಿಮಾದಲ್ಲಿ ನಟಿಸುವೆಯಾ ಎಂದು ಕೇಳಿಯೇ ಬಿಡುತ್ತಾರೆ. ಇವರಿಬ್ಬರ ಮಾತುಕತೆಯನ್ನು ಕೇಳಿದಂತಹ ಸುಧಾರಾಣಿಯವರ ಸಂಬಂಧಿಕರು ‘ಇಲ್ಲ ಆಕೆಗಿನ್ನು 13 ವರ್ಷ ನಾವು ಅವಳನ್ನು ಸಿನಿಮಾ ಇಂಡಸ್ಟ್ರಿಗೆ ಕಳಿಸೋದಿಲ್ಲ ಎಂದು ನಿರಾಕರಿಸಿಬಿಟ್ಟರು. ಆಗ ಪಾರ್ವತಮ್ಮ ಏನೇ ಆಗಲಿ ನನ್ನ ಮಗನ ಸಿನಿಮಾಗೆ ಆಕೆ ನಾಯಕಿಯಾಗಬೇಕು ಎಂದು ನಿರ್ಧರಿಸುತ್ತಾರೆ.

Actress Sudha Rani

ಕೈಮುಗಿತೀನಿ ಅವಕಾಶ ಕೊಡ್ರಿ ಎಂದು ಟೆನ್ನಿಸ್ ಕೃಷ್ಣ ಕಣ್ಣೀರು! ಅವಕಾಶಗಳಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುತ್ತಿರುವುದು ನೋಡಿದ್ರೆ ಕರುಳು ಹಿಂಡಿದಂತಾಗುತ್ತೇ!

ಅಷ್ಟು ಮುದ್ದಾಗಿದ್ದಾಳೆ ಅವಳನ್ನು ಸಿನಿಮಾ ರಂಗಕ್ಕೆ ಕಳುಹಿಸಿ ಆಕೆಯನ್ನು ಬೆಳೆಸುವ ಜವಾಬ್ದಾರಿ ನನ್ನದು, ಈ ಸಿನಿಮಾ ಹಿಟ್ಟಾಗಲಿಲ್ಲ ಎಂದರೆ ನಾನು ನೀವು ಏನು ಹೇಳಿದರೂ ಮಾಡಿಕೊಡುತ್ತೇನೆ’ ಎಂದೆಲ್ಲ ಕೇಳಿಕೊಳ್ಳುತ್ತಾರೆ.

ಹೀಗೆ ಸಾಕಷ್ಟು ದಿನಗಳ ಪ್ರಯತ್ನದ ನಂತರ ಸುಧಾ ರಾಣಿಯವರ ಮನೆಯವರು ತಮ್ಮ ಮಗಳನ್ನು ಚಿತ್ರದಲ್ಲಿ ಅಭಿನಯಿಸಲು ಕಳುಹಿಸಿದರು. ಹೀಗೆ ಶಿವಣ್ಣ ಹಾಗೂ ಸುಧಾರಣಿಯವರ ಜೋಡಿ ತೆರೆಯ ಮೇಲೆ ಮಾಡಿದಂತಹ ಮೋಡಿಯನ್ನು ಇಂದಿಗೂ ಸಿನಿಪೇಕ್ಷಕರು ಮರೆಯಲು ಸಾಧ್ಯವಿಲ್ಲ. ಈ ಘಟನೆಯು ಪಾರ್ವತಮ್ಮನವರಲ್ಲಿ ಅದೆಂಥ ಗ್ರಹಿಕಾ ಶಕ್ತಿ ಇತ್ತೆಂಬುದನ್ನು ಎತ್ತಿ ತೋರಿಸುತ್ತದೆ.

ಹುಟ್ಟಿದ ಮೂರೇ ತಿಂಗಳಿಗೆ ತಂದೆಯನ್ನು ಕಳೆದುಕೊಂಡ ನಟ ದೇವರಾಜ್ ಬಾಲ್ಯದಲ್ಲೆ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತಾ? ಒಪ್ಪತ್ತು ಊಟಕ್ಕೂ ಪರದಾಡಿದ ಅವರು ಚಿತ್ರರಂಗಕ್ಕೆ ಬಂದಿದ್ದೇಗೆ

Interesting Facts About Kannada Anand Movie Fame Actress Sudha Rani

Our Whatsapp Channel is Live Now 👇

Whatsapp Channel

Related Stories