ತಲೆ ಬಾಚ್ಕೋಳಿ ಪೌಡ್ರ್ ಹಾಕ್ಕೊಳ್ಳಿ.. ರಂಗಾಯಣ ರಘು ಅವರನ್ನು ಬಣ್ಣದ ಲೋಕ ಕೈಬಿಟ್ಟ ಮೇಲೆ ಅವರ ಸ್ಥಿತಿ ಏನಾಗಿದೆ ಗೊತ್ತಾ? ಅವಕಾಶಗಳೇ ಇಲ್ಲದಾಯ್ತ ಪಾಪ
ರಂಗಾಯಣ ರಘು ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ತಲೆ ಬಾಚಿಕೊಳ್ಳಿ ಪೌಡ್ರಾಕೊಳಿ ಎಂಬ ಡೈಲಾಗ್ ನೆನಪಿಗೆ ಬಂದುಬಿಡುತ್ತದೆ. ಅಷ್ಟರ ಮಟ್ಟಿಗೆ ಇವರ ಅದ್ಭುತ ಡೈಲಾಗ್, ಡೆಲಿವರಿ ಬಾಡಿ ಲ್ಯಾಂಗ್ವೇಜ್, ಪ್ರೇಕ್ಷಕರ ಹೃದಯಕ್ಕೆ ಕಚಗುಳಿ ಇಟ್ಟಿತ್ತು.
ಸ್ನೇಹಿತರೆ, ಹಲವಾರು ದಶಕಗಳಿಂದ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಸಾಕಷ್ಟು ಪಾತ್ರಗಳಿಗೆ ಜೀವ ತುಂಬುತ್ತ 250ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ಹಾಸ್ಯ ನಟ ರಂಗಾಯಣ ರಘು (Kannada Actor Rangayana Raghu) ಯಾರಿಗೆ ತಾನೇ ಗೊತ್ತಿಲ್ಲದಿರಲು ಸಾಧ್ಯ ಹೇಳಿ?
ರಂಗಾಯಣ ರಘು ಎನ್ನುತ್ತಿದ್ದ ಹಾಗೆ ನಮ್ಮೆಲ್ಲರಿಗೂ ತಲೆ ಬಾಚಿಕೊಳ್ಳಿ ಪೌಡ್ರಾಕೊಳಿ ಎಂಬ ಡೈಲಾಗ್ ನೆನಪಿಗೆ ಬಂದುಬಿಡುತ್ತದೆ. ಅಷ್ಟರ ಮಟ್ಟಿಗೆ ಇವರ ಅದ್ಭುತ ಡೈಲಾಗ್, ಡೆಲಿವರಿ ಬಾಡಿ ಲ್ಯಾಂಗ್ವೇಜ್, ಪ್ರೇಕ್ಷಕರ ಹೃದಯಕ್ಕೆ ಕಚಗುಳಿ ಇಟ್ಟಿತ್ತು.
ಇಂತಹ ಅದ್ಭುತ ನಟ ಇದೀಗ ಕನ್ನಡ ಸಿನಿಮಾ ರಂಗದಿಂದ (Kannada Film Industry) ದೂರ ಉಳಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವಕಾಶಗಳ ಕೊರತೆ.. ಇಂತಹ ಅದ್ಭುತ ಕಲಾವಿದರನ್ನು ಚಿತ್ರರಂಗ ಕಡೆಗಣಿಸುತ್ತಿದೆ ಎಂಬ ಕೂಗು ಅಭಿಮಾನಿಗಳ ವತಿಯಿಂದ ಕೇಳಿಬಂದಿದ್ದು?
ಸದ್ಯ ರಂಗಾಯಣ ರಘು ಹೇಗಿದ್ದಾರೆ? ಜೀವನೋಪಾಯಕ್ಕಾಗಿ ಏನು ಮಾಡಿಕೊಂಡಿದ್ದಾರೆ? ಇವರ ವೈಯಕ್ತಿಕ ಬದುಕು ಹೇಗಿದೆ ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ 2002ರ ಇಸ್ವಿಯಲ್ಲಿ ತೆರೆಕಂಡ ದುನಿಯಾ ಸಿನಿಮಾದ (Kannada Duniya Cinema) ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಳ್ತಾರೆ. ಈ ಮೂಲಕ ಗಮನಾರ್ಹ ಪಾತ್ರಗಳ ಮೂಲಕ ಪೋಷಕ ನಟನಾಗಿ, ಹಾಸ್ಯ ನಟನಾಗಿ, ಇನ್ನು ಕೆಲವೊಮ್ಮೆ ಖಳನಟನಾಗಿ, ರಂಗಭೂಮಿ ಕಲಾವಿದನಾಗಿಯೂ ರಂಗಾಯಣ ರಘು ನಮ್ಮೆಲ್ಲರನ್ನು ರಂಜಿಸಿದ್ದಾರೆ.
ಇನ್ನು 2001ರಲ್ಲಿ ತೆರೆಕಂಡ ಕುರಿಗಳು ಸಾರ್ ಕುರಿಗಳು ಎಂಬ ಸಿನಿಮಾದ ಮೂಲಕ ಬಣ್ಣದ ಲೋಕ ಪ್ರವೇಶ ಮಾಡಿದ ರಂಗಾಯಣ ರಘು ಅವರು ದಮ್, ಮೇಘ ಬಂತು ಮೇಘ ಎಂಬ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದರು.
ಆನಂತರ ತೆರೆಕಂಡ ರಂಗ ಎಸ್ಎಸ್ಎಲ್ಸಿ, ದುನಿಯಾ, ಜಯಮ್ಮನ ಮಗ, ಅಂಭಾರಿ, ಅಲೆಮಾರಿ ಸಿನಿಮಾದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡು ತಮ್ಮದೇ ಆದ ವಿಶಿಷ್ಟ ನಟನಾ ಛಾಪನ್ನು ಕನ್ನಡ ಸಿನಿಮಾ ರಂಗದಲ್ಲಿ ಮೂಡಿಸಿದರು.
ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಚಿಕ್ಕ ವಯಸ್ಸಿಗೆ ಮಂಗಳ ಎಂಬಾಕಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಂಗಾಯಣ ರಘು ಅವರಿಗೆ ಒಂದು ಮುದ್ದಾದ ಹೆಣ್ಣು ಮಗಳಿದ್ದು ಅವರು ಕೂಡ ರಂಗಭೂಮಿ ಕಲಾವಿದೆಯಾಗಿ ಬಣ್ಣದ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ.
ರಂಗಾಯಣ ರಘುವರಿಗೂ ಕೂಡ ಸಿನಿಮಾದ ಅವಕಾಶಗಳು ಕಡಿಮೆಯಾಗುತ್ತಾ ಇದ್ದಹಾಗೆ ಹೆಂಡತಿಯೊಂದಿಗೆ ಸೇರಿ ತಮ್ಮದೇ ಸಂಚಾರಿ ಥಿಯೇಟರ್ (Acting School) ನಿರ್ಮಾಣ ಮಾಡಿ ರಂಗಾಯಣ ರಘು ಸ್ಥಾಪಕನಾಗಿ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದು ಇತರರಿಗೂ ಕಲೆಯನ್ನು ಹೇಳಿಕೊಡುವ ಮೂಲಕ ತಮಗೆ ಗೊತ್ತಿರುವಂತಹ ಕಲೆಯನ್ನು ನಾಲ್ಕು ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.
ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ?
ತಮ್ಮೊಳಗೆ ಅಗಾಧವಾದ ಪ್ರತಿಭೆ ಇದ್ದರು ಕೂಡ ರಂಗಾಯಣ ರಘು ಅವರನ್ನು ಚಿತ್ರರಂಗ ಕಡೆಗೆಣಿಸಿದರು ತಾವು ಕಲಿತಿದ್ದನ್ನು ಇತರರಿಗೆ ಹಂಚುತ್ತಾ ಅದರಿಂದ ಬಂದಂತಹ ಹಣದಲ್ಲಿ ರಂಗಾಯಣ ರಘು ಸುಖವಾಗಿ ಜೀವನ ನಡೆಸುತ್ತಿದ್ದಾರೆ.
Unknown Facts and Real Life Story of Kannada Actor Rangayana Raghu
Follow us On
Google News |