ರೈತರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಈ ಯೋಜನೆಯಲ್ಲಿ ಸಿಗಲಿದೆ 90% ವರೆಗೂ ಸಬ್ಸಿಡಿ
ಕೃಷಿ ಚಟುವಟಿಕೆಗೆ (agriculture activities) ಅಗತ್ಯವಾದ ವಸ್ತು ಖರೀದಿ ಹಾಗೂ ಹೊಲಗಳಲ್ಲಿ ಅಥವಾ ಗದ್ದೆಗಳಲ್ಲಿ ಅಗತ್ಯ ಇರುವ ಕೆಲವು ತಂತ್ರಜ್ಞಾನಗಳ (technology implement) ಅಳವಡಿಕೆಗೆ ರೈತರು ಸಾಮಾನ್ಯವಾಗಿ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ (Loan facility) ಪಡೆದುಕೊಳ್ಳುತ್ತಾರೆ ಆದರೆ ಒಂದು ವೇಳೆ ಬೆಳೆ ಸರಿಯಾಗಿ ಬಾರದೆ ಇದ್ದರೆ ಈ ಸಾಲ ತೀರಿಸುವುದೇ ದೊಡ್ಡ ಸವಾಲಾಗಿರುತ್ತದೆ.
ಹೆಣ್ಣು ಮಕ್ಕಳಿಗೆ ಇಂತಹ ಆಸ್ತಿಯಲ್ಲಿ ಯಾವುದೇ ಕಾರಣಕ್ಕೂ ಪಾಲು ಸಿಗೋದಿಲ್ಲ! ಇಲ್ಲಿದೆ ಮಾಹಿತಿ
ಹೌದು, ದೇಶದಲ್ಲಿ ವಾಸಿಸುವ ಸಾಕಷ್ಟು ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆ ಸರಿಯಾಗಿ ಬಾರದಿದ್ದರೆ ಮಾಡಿಕೊಂಡ ಸಾಲ (Bank Loan) ತೀರಿಸಲು ಕೂಡ ಕಷ್ಟ ಪಡಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರದ ಕೆಲವು ಪ್ರಮುಖ ಯೋಜನೆಗಳು ರೈತರಿಗೆ ಅವರ ಕೃಷಿಯನ್ನು ಮುಂದುವರಿಸಲು ಉತ್ತೇಜನ ನೀಡುವುದರ ಜೊತೆಗೆ ರೈತರಿಗೆ ಹಣಕಾಸು ನೆರವನ್ನು ಕೂಡ ನೀಡುತ್ತವೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ! (Pradhanmantri krishi sinchai scheme)
ವಿಶೇಷವಾಗಿ ರೈತರ ಕೃಷಿ ಚಟುವಟಿಕೆಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದೆ. ತೋಟದಲ್ಲಿ ಕೃಷಿ ಹೊಂಡ ನಿರ್ಮಾಣ, ಸ್ಪಿಂಕ್ಲರ್ ಗಳ ಅಳವಡಿಕೆ, ಪಂಪ್ಸೆಟ್ ವ್ಯವಸ್ಥೆ ನೀರಾವರಿ ವ್ಯವಸ್ಥೆ ಮೊದಲಾದವುಗಳಿಗೆ ಸಂಬಂಧಪಟ್ಟಹಾಗೆ ರೈತರು ಸಾಲ ತೆಗೆದುಕೊಂಡರೆ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸಾಲ ಪಡೆಯಬಹುದು.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
ಸಬ್ಸಿಡಿ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Who can get subsidy Loan)
* ಕನಿಷ್ಠ ಎರಡು ಹೆಕ್ಟೇರ್ ಜಮೀನು ಹೊಂದಿರಬೇಕು.
* 202324ನೇ ಸಾಲಿನಲ್ಲಿ ಸರ್ಕಾರದ ಬೇರೆ ಯಾವುದೇ ಯೋಜನೆಯ ಪ್ರಯೋಜನವನ್ನು ರೈತರು ಪಡೆದಿರಬಾರದು.
* ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯೋಜನೆಗೆ ಅರ್ಹರು.
* ಕೃಷಿ ಹೊಂಡನ ನಿರ್ಮಾಣ ಮತ್ತು ಸೂಕ್ಷ್ಮ ನೀರಾವರಿ ಘಟಕ ಸ್ಥಾಪನೆಗೆ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡ ರೈತರು ಸಬ್ಸಿಡಿ ಪಡೆಯಬಹುದು.
ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಈಗಾಗಲೇ ಸಾಕಷ್ಟು ರೈತರು ಪ್ರಯೋಜನ ಪಡೆದುಕೊಂಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡ 90% ನಷ್ಟು ಮತ್ತು ಸಾಮಾನ್ಯ ರೈತರಿಗೆ ಶೇಕಡ 75% ನಷ್ಟು ಸಬ್ಸಿಡಿ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಫಲಾನುಭವಿ ರೈತರು ಹತ್ತಿರದ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಅಥವಾ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ
Farmers will get up to 90 Percent subsidy Loan from the center in this scheme