ರಾಜ್ಯ ಸರ್ಕಾರವು ಬಡವರ ಕಷ್ಟಕ್ಕೆ ನೆರವಾಗುವ ಸರ್ಕಾರ ಆಗಿದೆ. ರೈತರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಆ ಮೂಲಕ ರೈತರಿಗೆ ಕೃಷಿ ಕೆಲಸಕ್ಕೆ ಸಹಾಯ ಮಾಡುತ್ತಲೇ ಬಂದಿದೆ.
ಕೃಷಿ ಕೆಲಸ ಎಂದರೆ ಅಲ್ಲಿ ಮುಖ್ಯವಾಗಿ ನೀರಾವರಿ ವ್ಯವಸ್ಥೆ ಇರಬೇಕು. ಒಂದು ವೇಳೆ ನಿಮ್ಮ ಕೃಷಿ ನೆಲದಲ್ಲಿ ನೀರಾವರಿ ವ್ಯವಸ್ಥೆ ಚೆನ್ನಾಗಿಲ್ಲ ಎಂದರೆ, ನಿಮಗಾಗಿ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ರೈತರ ನೀರಾವರಿ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಗಂಗಾ ಕಲ್ಯಾಣ ಯೋಜನೆಯ (Ganga Kalyana Yojana) ಮೂಲಕ ರೈತರ ನೆಲದಲ್ಲಿ ಬೋರ್ವೆಲ್ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಸಹಾಯ ಸಿಗುತ್ತದೆ.
ಈ ಮೂಲಕ ರೈತರು ಕೃಷಿ ಕೆಲಸಕ್ಕೆ ಬೇಕಾಗುವ ನೀರನ್ನು ಬೋರ್ವೆಲ್ ಮೂಲಕ ಒದಗಿಸಿಕೊಳ್ಳಬಹುದು. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವುದು ಹೇಗೆ? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಗಂಗಾ ಕಲ್ಯಾಣ ಯೋಜನೆ ಅಂದರೆ ಏನು?
ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಮೂಲಕ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ರೈತರ ಕೃಷಿ ನೆಲದಲ್ಲಿ ತೆರೆದ ಬಾವಿ, ಕೊಳವೆ ಬಾವಿ ಅಥವಾ ಬೋರ್ವೆಲ್ ತೆರೆಯಲು ಸರ್ಕಾರದಿಂದ 1.5 ಲಕ್ಷದವರೆಗೂ ಉಚಿತ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ. ಬೆಂಗಳೂರು ಅರ್ಬನ್, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ 3.5 ಲಕ್ಷದವರೆಗು ರೈತರಿಗೆ ನೀಡಲಾಗುತ್ತಿದೆ.
*ಅರ್ಜಿ ಹಾಕುವವರು ಹಳ್ಳಿಯವರಾದರೆ ಅವರ ವಾರ್ಷಿಕ ಆದಾಯ 90 ಸಾವಿರದ ಒಳಗಿರಬೇಕು, ಸಿಟಿಯವರಾದರೆ ಅವರ ವಾರ್ಷಿಕ ಆದಾಯ 1.03 ಲಕ್ಷದ ಒಳಗಿರಬೇಕು.
*18 ರಿಂದ 55 ವರ್ಷಗಳ ಒಳಗಿರುವವರು ಅರ್ಜಿ ಸಲ್ಲಿಸಬಹುದು
*ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ಮಾತ್ರ ಅರ್ಜಿ ಸಲ್ಲಿಸಬಹುದು
*ಅರ್ಜಿ ಹಾಕುವವರು ಸಣ್ಣ ಕೃಷಿಕ ಆದರೂ ಆಗಿರಬೇಕು.
*ಅರ್ಜಿ ಹಾಕುವವರ ಪ್ರಮಾಣ ಪತ್ರ
*ರೇಷನ್ ಕಾರ್ಡ್ (Ration Card)
*ಆಧಾರ್ ಕಾರ್ಡ್ (Aadhaar Card)
*ಪ್ಯಾನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಬಿಪಿಎಲ್ ಕಾರ್ಡ್
*ಕೃಷಿ ನೆಲದ ಕೂಡಿವಿಕೆ ರಸ್ತೆ ಕಡತದ ಕಾಪಿ
*ಬ್ಯಾಂಕ್ ಪಾಸ್ ಬುಕ್ (Bank Passbook)
*ಭೂಮಿಯ ಕಂದಾಯ ರಶೀದಿ
*ಸ್ವಯಂ ಘೋಷಣೆ ಪತ್ರ
*ಸುರಕ್ಷಿತ ಸ್ವಯಂ ಘೋಷಣೆ ಪತ್ರ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019