ಈ ಸ್ಕೀಮ್ ನಲ್ಲಿ ಸಣ್ಣ ಬಿಸಿನೆಸ್ ಮಾಡೋಕೆ 15 ಸಾವಿರ ಸರ್ಕಾರವೇ ಕೊಡುತ್ತೆ; ಅರ್ಜಿ ಸಲ್ಲಿಸಿ!

ಈ ಯೋಜನೆಗಳ ಮೂಲಕ ಸಾಲ ಸೌಲಭ್ಯ (loan facility) ಪಡೆದುಕೊಂಡು ಜೊತೆಗೆ ಸಬ್ಸಿಡಿ (subsidy) ಸೌಲಭ್ಯವನ್ನು ಪಡೆದು ಸ್ವಂತ ಉದ್ಯಮವನ್ನು ಆರಂಭಿಸಬಹುದು

Bengaluru, Karnataka, India
Edited By: Satish Raj Goravigere

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ಸ್ವಂತ ದುಡಿಮೆ ಹೊಂದಿರಬೇಕು ಎನ್ನುವ ಉದ್ದೇಶದಿಂದ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದ್ದಾರೆ.

ಈ ಯೋಜನೆಗಳ ಮೂಲಕ ಸಾಲ ಸೌಲಭ್ಯ (loan facility) ಪಡೆದುಕೊಂಡು ಜೊತೆಗೆ ಸಬ್ಸಿಡಿ (subsidy) ಸೌಲಭ್ಯವನ್ನು ಪಡೆದು ಸ್ವಂತ ಉದ್ಯಮವನ್ನು ಆರಂಭಿಸಬಹುದು (Own Business), ಇದು ಯುವಕ ಯುವತಿಯರಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ.

Aadhaar card is enough, you can get a loan of 50,000 without any guarantee

ಜಸ್ಟ್ 100 ರೂಪಾಯಿ ಇನ್ವೆಸ್ಟ್ ಮಾಡಿ ಸಾಕು, ಡೈಲಿ ಸಾವಿರ ರೂಪಾಯಿ ಆದಾಯ!

ಲೋಕಸಭಾ ಎಲೆಕ್ಷನ್ 2024 (Loksabha election 2024) ಸದ್ಯದಲ್ಲಿಯೇ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (central government) ದ ಯೋಜನೆಗಳ ಬಗ್ಗೆ ಜನರು ಆಸಕ್ತರಾಗಿದ್ದಾರೆ.

ಅದೇ ರೀತಿ ಮೋದಿಜಿ ಸರ್ಕಾರ ಜನರಿಗೆ ಹೆಚ್ಚು ಲಾಭ ನೀಡಬಲ್ಲ ಯೋಜನೆಗಳಿಗೆ ಮೊದಲ ಪ್ರಧಾನ್ಯಯತೆ ನೀಡುತ್ತಿದೆ. ಹೀಗೆ ಕೇಂದ್ರ ಸರ್ಕಾರ ಪರಿಚಯಿಸಿರುವ ಯೋಜನೆಗಳಲ್ಲಿ ವಿಶ್ವಕರ್ಮ ಯೋಜನೆ ಕೂಡ ಒಂದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ! (PM Vishwakarma Yojana)

ಕುಶಲಕರ್ಮಿಗಳು ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಹಾಗೂ ಕುಶಲ ಕರ್ಮಿ ಕೆಲಸಕ್ಕೆ ಸಂಬಂಧಪಟ್ಟ ಉದ್ಯಮವನ್ನು ಆರಂಭಿಸಲು ಸರ್ಕಾರ ಸಾಲ ಸೌಲಭ್ಯ (Loan) ನೀಡುವ ಯೋಜನೆ ಇದಾಗಿದೆ.

10,000ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ. ಅಂದರೆ ನೀವು 5% ಬಡ್ಡಿ ದರ (rate of interest) ದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು ಹಾಗೂ ಮೊದಲನೇ ಹಂತದಲ್ಲಿ ಹಣ ಮರುಪಾವತಿ (Loan Repayment) ಮಾಡಿದ ನಂತರ ಎರಡನೇ ಹಂತದ ಎರಡು ಲಕ್ಷ ರೂಪಾಯಿಗಳ ಸಾಲವನ್ನು 5% ಬಡ್ಡಿ ದರದಲ್ಲಿ ಪಡೆಯಬಹುದು.

ಸ್ವಂತ ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

Loan schemeಇದಕ್ಕೆ ಸರ್ಕಾರದ 10,000ಗಳ ಸಬ್ಸಿಡಿ ಸಿಗುತ್ತದೆ. ಮೊದಲ ಕಂತಿನ ಹಣವನ್ನು ಎಂಟು ತಿಂಗಳ ಅವಧಿಯಲ್ಲಿ ಹಾಗೂ ಎರಡನೇ ಕಂತಿನ ಎರಡು ಲಕ್ಷ ರೂಪಾಯಿಗಳನ್ನು 30 ತಿಂಗಳ ಅವಧಿಯಲ್ಲಿ ಹಿಂತಿರುಗಿಸಬೇಕು.

ಇನ್ನು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕುಶಲಕರ್ಮಿಗಳಿಗೆ ಐದರಿಂದ ಏಳು ದಿನಗಳವರೆಗೆ ತರಬೇತಿ (training) ನೀಡಲಾಗುತ್ತದೆ ತರಬೇತಿ ಅವಧಿಯಲ್ಲಿ 500 ರೂಪಾಯಿಗಳನ್ನು ಪ್ರತಿ ವ್ಯಕ್ತಿಗೆ ಪಾವತಿ ಮಾಡಲಾಗುತ್ತದೆ. ಅಷ್ಟೇ ಅಲ್ಲ 15000 ಮೌಲ್ಯದ ಟೂಲ್ ಕಿಟ್ (tool kit);ಅನ್ನು ಕೂಡ ಟ್ರೈನಿಂಗ್ ಸಮಯದಲ್ಲಿ ಪಡೆದುಕೊಳ್ಳಬಹುದು.

ಒಂದು ರೇಷನ್ ಕಾರ್ಡ್ ಮೂಲಕ ವರ್ಷಕ್ಕೆ ಎಷ್ಟು ಸಿಲಿಂಡರ್ ಪಡೆಯಬಹುದು ಗೊತ್ತಾ?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು!

ಕುಶಲ ಕರ್ಮಿ ಉದ್ಯಮ ಮಾಡುವ ಅಂದರೆ ಸಾಂಪ್ರದಾಯಿಕ ಉದ್ಯಮಗಳನ್ನು ಮಾಡುತ್ತಾ ಬಂದಿರುವ ಯಾವುದೇ ವ್ಯಕ್ತಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ವರ್ಷ ಮೀರಿದವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು.

ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್ ಬ್ಯಾಂಕ್ ಖಾತೆಯ ಮಾಹಿತಿ ವಿಳಾಸದ ಪುರಾವೆ ಹಾಗೂ ಉದ್ಯಮದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು https://www.pmvishwakarma.gov.in ಸರ್ಕಾರದ ಈ ಅಧಿಕೃತ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

ಸರ್ಕಾರದಿಂದಲೇ ಸಿಗಲಿದೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ! ಸುಲಭವಾಗಿ ಪಡೆದುಕೊಳ್ಳಿ

the government will give 15,000 to a small business In this scheme