ಮಹಿಳೆಯರಿಗೆ ಎಲ್ಲಾ ಕಡೆ ಸ್ವಾತಂತ್ರ್ಯವಾಗಿ ಇರಲು ಸಾಧ್ಯವಿಲ್ಲ, ಎಲ್ಲದಕ್ಕೂ ಒಂದು ಕಡಿವಾಣವನ್ನು ಹಾಕುತ್ತಲೇ ಇರಲಾಗುತ್ತದೆ. ಆದರೆ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ಗಂಡಸರಿಗಿಂತ ಒಳ್ಳೆಯ ರೀತಿಯಲ್ಲಿ ಎಲ್ಲಾ ಕೆಲಸಗಳಲ್ಲಿ ಕೂಡ ಹೆಣ್ಣುಮಕ್ಕಳು ತೊಡಗಿಸಿಕೊಳ್ಳುತ್ತಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ.
ನಮ್ಮ ಸರ್ಕಾರ ಕೂಡ ಹೆಣ್ಣುಮಕ್ಕಳಿಗೆ ಸಪೋರ್ಟ್ (Women Scheme) ಮಾಡುತ್ತದೆ. ಮಹಿಳಾ ಸಬಲೀಕರಣಕ್ಕಾಗಿ, ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಕೆಲವರಿಗೆ ಈಗಲೂ ಕೂಡ ಹೆಣ್ಣುಮಕ್ಕಳು ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ ಎನ್ನುವ ಮನಸ್ಥಿತಿಗಳು ಇದೆ. ಆದರೆ ಹೆಣ್ಣಿಗೆ ಒಂದು ಅವಕಾಶ ಸಿಕ್ಕರೆ, ತಾನು ಏನು ಎನ್ನುವುದನ್ನು ತೋರಿಸುತ್ತಾಳೆ.
ಅದೇ ರೀತಿಯಲ್ಲಿ ಈಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾಲಿಟ್ಟು, ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನ ನಿರೂಪಿಸಿದ್ದಾರೆ. ಇನ್ನು ಹೆಣ್ಣುಮಕ್ಕಳ ಸಾಮರ್ಥ್ಯ ಅರಿತಿರುವ ಸರ್ಕಾರ, ಅವರಿಗೆ ಸಪೋರ್ಟ್ ಮಾಡುವುದಕ್ಕೆ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಇದೀಗ ಜಾರಿಗೆ ಬಂದಿರುವ ಕೃಷಿ ಸಖಿ ಯೋಜನೆ, ಹಳ್ಳಿ ಪ್ರದೇಶದ ಹೆಣ್ಣುಮಕ್ಕಳು ಕೃಷಿ ಕೆಲಸಗಳಲ್ಲಿ ಸೇರಿಕೊಳ್ಳುವುದಕ್ಕೆ, ಕೃಷಿಯಲ್ಲಿ ಹೆಣ್ಣುಮಕ್ಕಳು ಸಹ ಸ್ವಉದ್ಯೋಗ ಶುರು (Own Business) ಮಾಡಲಿ ಎಂದು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯನ್ನು ಲಕ್ಪದಿ ದೀದಿ ಯೋಜನೆಯ ಆಡಿಯಲ್ಲಿ ಜಾರಿಗೆ ತರಲಾಗಿದೆ. ರಾಜ್ಯದ ಮಹಿಳೆಯರು ಯಾವುದೇ ಕಾರಣಕ್ಕೂ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಿಸಬಾರದು ಎಂದು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಎಲ್ಲಾ ತರಬೇತಿಗಳನ್ನು ಕೃಷಿ ಸಖಿ ಯೋಜನೆಯ ಅಡಿಯಲ್ಲಿ ಕೊಡಲಾಗುತ್ತದೆ. ಮಹಿಳೆಯರು ಈ ತರಬೇತಿ ಪಡೆದು, ತಮ್ಮದೇ ಸ್ವಂತ ಕೆಲಸ ಶುರು ಮಾಡಿ, ಕೃಷಿಯಲ್ಲಿ ತೊಡಗಿಕೊಂಡು, ಇದರಿಂದ ಹಣ ಗಳಿಸಬಹುದು. ಈ ರೀತಿಯಾಗಿ ಮಹಿಳೆಯರು ಅವರ ಕುಟುಂಬಗಳನ್ನು ನೋಡಿಕೊಳ್ಳಬಹುದು.
ಇದರಿಂದ ಅವರ ಮನೆಯ ಆರ್ಥಿಕ ಸಮಸ್ಯೆ ಕಡಿಮೆ ಆದ ಹಾಗೆ ಆಗುತ್ತದೆ. ಈ ತರಬೇತಿ (Training) ಪಡೆಯುವ ಮಹಿಳೆ, ಕೆಲಸ ಶುರು ಮಾಡಿ ವರ್ಷಕ್ಕೆ ₹60,000 ಇಂದ ₹80,000 ವರೆಗೂ ಹಣ ಸಂಪಾದನೆ ಮಾಡಬಹುದು.
ಈ ಮೂಲಕ ಮಹಿಳೆಯರು ಅವರ ಮನೆಯನ್ನು, ಮನೆಯವರನ್ನು ನೋಡಿಕೊಳ್ಳಲಿ ಎನ್ನುವುದೇ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶ ಆಗಿದೆ. ಹಾಗಾಗಿ ಎಲ್ಲಾ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019