Karnataka NewsBangalore News

ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ! ಕನ್ನಡಿಗರಿಗೆ ಉದ್ಯೋಗ ಮೀಸಲು

ಸ್ಟ್ಯಾಂಡಿಂಗ್ ಆರ್ಡರ್ (standing order) ನಲ್ಲಿ ಬದಲಾವಣೆ ತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ (minister Santosh lad) ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ, ಕಾಂಗ್ರೆಸ್ ಸರ್ಕಾರ (Congress government) ಜಾರಿಗೆ ತಂದಿರುವ, ಗ್ಯಾರಂಟಿ ಯೋಜನೆಗಲ್ಲಿ ಯುವ ನಿಧಿ (Yuva Nidhi scheme) ಯೋಜನೆ ಕೂಡ ಒಂದು. ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ನಿರುದ್ಯೋಗಿ (unemployment) ಯುವಕ ಯುವತಿಯರಿಗೆ ಎರಡು ವರ್ಷಗಳ ಕಾಲ ಉಚಿತವಾಗಿ ಧನ ಸಹಾಯ ಅಥವಾ ನಿರುದ್ಯೋಗ ಭತ್ಯೆ (unemployment allowance) ನೀಡಲು ಸರ್ಕಾರ ತೀರ್ಮಾನಿಸಿದೆ.

ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!

ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ ಜಾರಿ!

ರಾಜ್ಯದಲ್ಲಿ ಯುವ ಜನತೆ ನಿರುದ್ಯೋಗಿಗಳಾಗಿದ್ದರೆ ಆರ್ಥಿಕ ಪರಿಸ್ಥಿತಿಯ ಮೇಲೆ ಕೂಡ ಪರಿಣಾಮ ಇರುತ್ತದೆ, ಹಾಗಾಗಿ ನಿರುದ್ಯೋಗವನ್ನು ಹೋಗಲಾಡಿಸಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ ಎನ್ನಬಹುದು.

ಇದೇ ಕಾರಣಕ್ಕೆ ಈಗ ಸ್ಟ್ಯಾಂಡಿಂಗ್ ಆರ್ಡರ್ ಒಂದನ್ನು ಉದ್ಯೋಗದ ವಿಚಾರದಲ್ಲಿ ತರಲು ನಿರ್ಧರಿಸಲಾಗಿದ್ದು ಇದರಿಂದ ಕೋಟ್ಯಂತರ ಕನ್ನಡಿಗರಿಗೆ ಪ್ರಯೋಜನ ಆಗಲಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್

Yuva Nidhi Yojana - Yuva Nidhi Schemeಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ!

ಯಾವುದೇ ಖಾಸಗಿ ಉದ್ಯೋಗವಾಗಿರಲಿ ಅಥವಾ ಸರ್ಕಾರಿ ಹುದ್ದೆಗಳು (government job) ಆಗಿರಲಿ ಕನ್ನಡಿಗರಿಗೆ ಹಾಗೂ ವಿಕಲಚೇತನರಿಗೆ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಆದರೂ ಕೂಡ ಕನ್ನಡಿಗರಿಗೆ ಹಾಗೂ ಅಂಗವಿಕಲತೆ ಹೊಂದಿರುವವರಿಗೆ ಮೀಸಲಾತಿ ನೀಡಬೇಕು ಎನ್ನುವ ಸ್ಟ್ಯಾಂಡಿಂಗ್ ಆರ್ಡರ್ನಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಶೀರ್ಘದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಮಹತ್ವದ ಅಪ್ಡೇಟ್; ಸ್ಕೀಮ್ ನಲ್ಲಿ ಧಿಡೀರ್ ಬದಲಾವಣೆ

ಸಾಮಾನ್ಯವಾಗಿ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಅದರಲ್ಲೂ ಖಾಸಗಿ ವಲಯದ ಕಂಪನಿಗಳು ಕನ್ನಡಿಗರಿಗೆ ವಿಶೇಷವಾದ ಬೆಲೆ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಈಗ ಹೊಸ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದ್ದು ಸದ್ಯದಲ್ಲಿಯೇ ರಾಜ್ಯದಲ್ಲಿ ಯಾವುದೇ ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳಿಗೆ ಕನ್ನಡಿಗರು ಕೂಡ ವಿಶೇಷವಾಗಿ ಅರ್ಜಿ ಸಲ್ಲಿಸಿ ಮೀಸಲಾತಿ ಆಧಾರದ ಮೇಲೆ ಉದ್ಯೋಗ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

ಈ ಒಂದು ಯೋಜನೆ ಕಡ್ಡಾಯವಾಗಿ ಜಾರಿಗೆ ಬಂದರೆ ರಾಜ್ಯದಲ್ಲಿ ಲಕ್ಷಾಂತರ ಕನ್ನಡಿಗ ಯುವಕ ಯುವತಿಯರು ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಇದರಿಂದ ಉದ್ಯೋಗ ಸೃಷ್ಟಿ ಹಾಗೂ ಉದ್ಯೋಗ ಸಮಸ್ಯೆ ಕೂಡ ನಿರ್ಮೂಲನೆಗೊಳ್ಳಲು ಸಹಾಯವಾಗುತ್ತದೆ.

Another scheme After Yuva Nidhi scheme, Job reservation for Kannadigas

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories