ಸಾಮಾಜಿಕ ಭದ್ರತೆ ಹಾಗೂ ಸಾರ್ವಜನಿಕರ ಹಿತಾಸಕ್ತಿ (public Interest) ಇವೆರಡು ಕೇಂದ್ರ ಸರ್ಕಾರ (Central government) ದ ಮೂಲ ಮಂತ್ರವಾಗಿದೆ, ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ಅನುಕೂಲವಾಗುವಂತಹ ಬೇರೆ ಬೇರೆ ರೀತಿಯ ಯೋಜನೆ (schemes) ಗಳನ್ನು ಜಾರಿಗೆ ತರುವುದರ ಮೂಲಕ ಉತ್ತಮ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ.
ಅದು ಬ್ಯಾಂಕ್ ಖಾತೆಯನ್ನು ತೆರೆಯುವುದು ಆಗಿರಬಹುದು ಅಥವಾ ಬ್ಯಾಂಕ್ ನಲ್ಲಿ ತೆಗೆದುಕೊಂಡ ಸಾಲಕ್ಕೆ ಸಬ್ಸಿಡಿ (subsidy for loans) ನೀಡುವುದೇ ಆಗಿರಬಹುದು, ಆದರೆ ಇದೆಲ್ಲ ವಿಚಾರಗಳಲ್ಲಿಯೂ ಕೂಡ ಕೇಂದ್ರ ಸರ್ಕಾರದ ಒಂದಿಷ್ಟು ಪ್ರಯೋಜನಗಳನ್ನು ನೀವು ಪಡೆಯಬಹುದು.
![ಯಾವುದೇ ಬ್ಯಾಂಕ್ ಅಕೌಂಟ್ ಇದ್ದವರಿಗೆ ಭರ್ಜರಿ ಸುದ್ದಿ! 2 ಲಕ್ಷ ರೂಪಾಯಿ ಪಡೆಯಿರಿ - Kannada News Bank Account](https://kannadanews.today/wp-content/uploads/2023/09/What-is-the-balance-in-your-Bank-savings-account-How-much-should-it-be.jpg.webp)
ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ಸಿಗುತ್ತೆ 500 ರೂಪಾಯಿ! ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರದ ಟರ್ಮ್ ಇನ್ಸೂರೆನ್ಸ್ ಯೋಜನೆ! (Central Government term insurance policy)
ದೇಶದಲ್ಲಿ ವಾಸಿಸುವ ಯಾವುದೇ ಬಡ ಪ್ರಜೆ, ಅತಿ ಕಡಿಮೆ ಹಣವನ್ನ ಹೂಡಿಕೆ ಮಾಡಿ ಉತ್ತಮ ಲಾಭ ಪಡೆದುಕೊಳ್ಳುವಂತಹ ಟರ್ಮ್ ಇನ್ಸೂರೆನ್ಸ್ ಅನ್ನು ಸರ್ಕಾರದಿಂದಲೇ ಪಡೆದುಕೊಳ್ಳಲು ಸಾಧ್ಯವಿದೆ.
ವಾರ್ಷಿಕವಾಗಿ ಕೇವಲ 12 ಮತ್ತು 330ಗಳನ್ನು ಪಾವತಿ ಮಾಡುವುದರ ಮೂಲಕ ಎರಡು ಲಕ್ಷ ರೂಪಾಯಿಗಳ ಪ್ರಯೋಜನ ಪಡೆಯಬಹುದಾಗಿದೆ. ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಪ್ಲಾನ್ ಗಳನ್ನು ಸರ್ಕಾರ ಜನರಿಗಾಗಿ ಬಿಡುಗಡೆ ಮಾಡಿದ್ದು ಅತಿ ಕಡಿಮೆ ಹೂಡಿಕೆಯಿಂದ ಹೆಚ್ಚು ಲಾಭ ಪಡೆಯಬಹುದಾದ ಪಾಲಿಸಿಗಳು ಇವು.
ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯೋದು ಹೇಗೆ? ಕಾನೂನು ತಿಳಿಯಿರಿ
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)!
ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 330ಗಳನ್ನು ಪಾವತಿ ಮಾಡಬೇಕು. ಪಾಲಿಸಿದ್ದಾರೆ ಸಹಜವಾಗಿ ವ್ಯಕ್ತಪಟ್ಟರೆ ನಾಮಿನಿ (nominee) ಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುವುದು.
ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ (PMSBY)!
ಈ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ಕೇವಲ ಹನ್ನೆರಡು ರೂಪಾಯಿಗಳನ್ನು ಪಾವತಿ ಮಾಡಿದ್ರೆ ಸಾಕು. ಅಪಘಾತದಲ್ಲಿ ಪಾಲಿಸಿದ್ದಾರೆ ಮರಣ ಹೊಂದಿದರೆ ಈ ವಿಮಾ ಹಣವನ್ನು ನಾಮಿನಿ ಅಥವಾ ಕುಟುಂಬದವರಿಗೆ ನೀಡಲಾಗುವುದು.
ನೀವು ಪಾವತಿ ಮಾಡುವ ಈ ಅತ್ಯಲ್ಪ ಹಣ ಸರ್ಕಾರಕ್ಕೆ ಸೇರುತ್ತದೆ ಹಾಗೂ ಸರ್ಕಾರದಿಂದ ನಿಮಗೆ ನಿಮ್ಮ ಪ್ರಯೋಜನ ಸಿಗುತ್ತದೆ. ಇದು ನೂರು ಪ್ರತಿಶತದಷ್ಟು ಗ್ಯಾರಂಟಿ ಇನ್ಸೂರೆನ್ಸ್ ಆಗಿರುವುದರಿಂದ ನೀವು ಬೇರೆ ಕಂಪನಿಗಳಲ್ಲಿ ಹೂಡಿಕೆ (Investment) ಮಾಡುವಾಗ ಆಗುವ ಮಾರುಕಟ್ಟೆ ನಷ್ಟದ ಬಗ್ಗೆ ಚಿಂತೆ ಮಾಡುವಂತೆ ಮಾಡುವ ಅಗತ್ಯ ಇಲ್ಲ. ಅಷ್ಟೇ ಅಲ್ಲದೆ ಪ್ರತಿ ತಿಂಗಳು ಪ್ರೀಮಿಯಂ ಪಾವತಿ ಮಾಡುವ ಸಮಸ್ಯೆಯೂ ಇಲ್ಲ.
ಇಂತಹ ಜನರು ಇನ್ಮುಂದೆ ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇಲ್ಲ! ಇಲ್ಲಿದೆ ಮಾಹಿತಿ
ಈ ಮೇಲಿನ ವಿಮೆ ಮಾಡಿಸಿಕೊಳ್ಳಲು ಬೇಕಾಗಿರುವ ದಾಖಲೆಗಳು!
ವ್ಯಕ್ತಿಯ ಆಧಾರ್ ಕಾರ್ಡ್
ಬ್ಯಾಂಕ ಖಾತೆ ಹೊಂದಿರಬೇಕು (ಇ-ಕೆವೈಸಿ ಕಡ್ಡಾಯ)
ಪಾಸ್ ಪೋರ್ಟ್ ಅಳತೆಯ ಫೋಟೋ
ಮೊಬೈಲ್ ಸಂಖ್ಯೆ
ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for these insurance)
ಈ ವಿಮಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ. ಅಳಿಯ ಸಿಬ್ಬಂದಿಗಳನ್ನು ಸಂಪರ್ಕ ಮಾಡಿ ಅಗತ್ಯ ಇರುವ ದಾಖಲೆ ಮತ್ತು ಮಾಹಿತಿಗಳನ್ನು ನೀಡಿ ಈ ವಿಮಾ ಯೋಜನೆಗೆ ಚಂದದಾರರಾಗಬಹುದು. ನಿಮ್ಮ ಅನುಮತಿಯ ಮೇರೆಗೆ ಪ್ರತಿ ಕಂತಿನ ಹಣ ನಿಮ್ಮ ಖಾತೆಯಿಂದ ಆಟೋ ಡೆಬಿಟ್ (auto debit) ಆಗುವಂತೆ ಮಾಡಲಾಗುವುದು. ಅತಿ ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ನೀಡುವಂತಹ ಈ ವಿಮಾ ಯೋಜನೆಯಲ್ಲಿ ತಕ್ಷಣವೇ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.
Great news for those who have any bank account, Get Rs 2 lakh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.