ಸರ್ಕಾರಗಳು ಗ್ರಾಮೀಣ ಭಾಗದಲ್ಲಿ (village area) ವಾಸಿಸುವ ಜನರಿಗೆ ಒಂದಲ್ಲ ಒಂದು ರೀತಿಯ ಸೇವೆಗಳನ್ನು ಒದಗಿಸುತ್ತಿದ್ದು ಈಗ ಸೇವಾ ಕೇಂದ್ರ ಶುರು ಮಾಡುವುದಕ್ಕೆ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಅವಕಾಶ ಮಾಡಿಕೊಡುತ್ತಿದೆ, ನಿರುದ್ಯೋಗಿ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಇಂದು ಸರ್ಕಾರದ ಯಾವುದೇ ಯೋಜನೆ ಜಾರಿಗೆ ಬಂದರೂ ಕೂಡ ಅದನ್ನ ಗ್ರಾಮೀಣ ಭಾಗದಲ್ಲಿ ಇರುವ ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮ ವನ್ ಸೇವಾ ಕೇಂದ್ರಗಳು (grammar one centre) ಮಾಡುತ್ತವೆ.
![ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ! ಪ್ರಾಂಚೈಸಿ ಪಡೆಯಿರಿ - Kannada News Gram One Office Franchise](https://kannadanews.today/wp-content/uploads/2023/12/Applications-are-invited-to-open-Gram-One-Center-in-your-district.jpg.webp)
ಇತ್ತೀಚಿಗಂತೂ ರಾಜ್ಯದಲ್ಲಿ ಗ್ರಾಮ ಒನ್ ಹಾಗೂ ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಜನ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನ ತೆರೆಯುವುದು ಅಗತ್ಯವಾಗಿದ್ದು ಈಗ ಸರ್ಕಾರ ರಾಜ್ಯದಲ್ಲಿ ವಾಸಿಸುವ ನಿರುದ್ಯೋಗಿ ಯುವಕರಿಗೆ ಈ ಕೇಂದ್ರ ಸ್ಥಾಪಿಸಲು ಅವಕಾಶ ಕಲ್ಪಿಸಿಕೊಡುತ್ತದೆ.
4000 ಉಚಿತ ಬೈಕ್ ವಿತರಣೆಗೆ ಅರ್ಜಿ ಸಲ್ಲಿಸಿ! ರಾಜ್ಯ ಸರ್ಕಾರದ ದೊಡ್ಡ ಘೋಷಣೆ
ಗ್ರಾಮ್ ಒನ್ ಯಾಕೆ ಬೇಕು!
ಸರ್ಕಾರದಿಂದ ಯಾವುದೇ ಹೊಸ ಯೋಜನೆ ಘೋಷಣೆ ಆದರೂ ಅದರ ಪ್ರಯೋಜನವನ್ನು ಗ್ರಾಮ ಒನ್ ನಲ್ಲಿಯೇ ಪಡೆದುಕೊಳ್ಳಬಹುದು. ಈಗಾಗಲೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಇರುವ 80 ಇಲಾಖೆಗಳಿಂದ ನೀಡಲಾಗುತ್ತಿರುವ 798 ಯೋಜನೆಯ ಪ್ರಯೋಜನಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಕೆಲಸವನ್ನು ಗ್ರಾಮ ಒನ್ ಕೇಂದ್ರಗಳು ಮಾಡುತ್ತಿವೆ.
ಗ್ರಾಮ ಒನ್ ಕೇಂದ್ರ ಆರಂಭಿಸಲು ಯುವಕರಿಗೆ ಅವಕಾಶ! (Opportunity for youth to start Gram One Kendra)
ಗ್ರಾಮ ಒನ್ ಪ್ರಾಂಚೈಸಿ (drama one franchise) ಯನ್ನು ಕಲ್ಬುರ್ಗಿ ಮೈಸೂರ್ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಆಸಕ್ತ ಯುವಕರ ಅರ್ಜಿ ಸಲ್ಲಿಸಿ ಗ್ರಾಮ ಒನ್ ಪ್ರಾಂಚೈಸಿಯನ್ನು ಪಡೆದುಕೊಂಡು ಹಣ ಸಂಪಾದಿಸಬಹುದು.
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ
ಅರ್ಜಿ ಸಲ್ಲಿಸಲು ಅರ್ಹತೆಗಳು! (Eligibility)
*ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
*18 ವರ್ಷ ಮೀರಿದ ಯುವಕರು ಅರ್ಜಿ ಸಲ್ಲಿಸಬಹುದು.
*10ನೇ ತರಗತಿ ಉತ್ತೀರ್ಣರಾಗಿರಬೇಕು ಹೆಚ್ಚು ವಿದ್ಯಾಭ್ಯಾಸ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
*ಇಂಗ್ಲಿಷ್ ಎರಡು ಭಾಷೆಯನ್ನು ಟೈಪ್ ಮಾಡಲು ಓದಲು ಬರೆಯಲು ತಿಳಿದಿರಬೇಕು.
*ಕಂಪ್ಯೂಟರ್ ಜ್ಞಾನ ಇರಬೇಕು
*ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಕ್ರಿಮಿನಲ್ ಕೇಸ್ ಗಳನ್ನು ಹೊಂದಿಲ್ಲ ಎನ್ನುವುದಕ್ಕೆ ಪೊಲೀಸ್ ದೃಢೀಕರಣ ಪ್ರಮಾಣ ಪತ್ರ ಒದಗಿಸಬೇಕು.
*ರಸ್ತೆ ಸಂಪರ್ಕ ವಿದ್ಯುತ್ ಮೊದಲಾದ ವ್ಯವಸ್ಥೆ ಇರುವ ಜಾಗ ಹೊಂದಿರಬೇಕು.
ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ
ಗ್ರಾಮ ಒನ್ ಸೇವಾ ಕೇಂದ್ರ ಆರಂಭಿಸಲು ಬೇಕಾಗಿರುವ ವಸ್ತುಗಳು! (Things You needed)
ಕಂಪ್ಯೂಟರ್ ಸಿಸ್ಟಮ್ ಅಥವಾ ಲ್ಯಾಪ್ಟಾಪ್ (Laptop)
ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡುವ ಸಾಧನ (Finger Print Scanner)
ಪ್ರಿಂಟರ್ (Printer)
ವೆಬ್ ಕ್ಯಾಮೆರಾ (Web Camera)
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)
ಅಭ್ಯರ್ಥಿಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸದ ಪ್ರೂಫ್, ಸ್ವಯಂ ಘೋಷಣಾ ಪತ್ರ, ಬ್ಯಾಂಕ್ ಪಾಸ್ ಬುಕ್ ವಿವರ, ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ದಾಖಲೆಗಳು ಪ್ರಮುಖ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ! ಇನ್ಮುಂದೆ ಪ್ರತಿ ತಿಂಗಳು ಹೊಸ ಅರ್ಜಿ ಸ್ವೀಕಾರ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಗ್ರಾಮ ಒನ್ ಪ್ರಾಂಚೈಸಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸಿದರೆ http://kal-mys.gramaone.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ದಾಖಲೆಗಳ ಸ್ಕ್ಯಾನ್ ಪ್ರತಿ ಸಲ್ಲಿಸಬೇಕು. ಅರ್ಜಿ ಶುಲ್ಕ 100 ರೂಪಾಯಿ ಪಾವತಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಸಹಾಯವಾಣಿ ಸಂಖ್ಯೆ 9148712473 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಗ್ರಾಮ ಒನ್ ಆರಂಭಿಸಲು ಅವಕಾಶವಿರುವ ಜಿಲ್ಲೆಗಳು!
ಮೈಸೂರು ವಿಭಾಗ:
ಚಾಮರಾಜನಗರ, ಚಿಕ್ಕಮಗಳೂರು
ದಕ್ಷಿಣ ಕನ್ನಡ, ಹಾಸನ
ಕೊಡಗು, ಮಂಡ್ಯ
ಉಡುಪಿ, ಮೈಸೂರು.
ಕಲಬುರ್ಗಿ ವಿಭಾಗ:
ಬಳ್ಳಾರಿ
ಬೀದರ್, ಗುಲ್ಬರ್ಗ
ಕೊಪ್ಪಳ, ರಾಯಚೂರು
ಯಾದಗಿರಿ, ವಿಜಯನಗರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2023 ಅಂದರೆ ಇಂದೇ ಕೊನೆಯ ದಿನಾಂಕವಾಗಿದ್ದು ಆಸಕ್ತಿ ಇದ್ದವರು ತಕ್ಷಣ ಅರ್ಜಿ ಸಲ್ಲಿಸಿ.
ಯುವ ನಿಧಿ ಯೋಜನೆಗೆ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ
Applications are invited to open Gram One Center in your district
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.