ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆ ಜಾರಿ

ವಿದ್ಯಾರ್ಥಿಗಳಿಗೆ (good education for students) ಸರಿಯಾದ ಶಿಕ್ಷಣ ದೊರೆತಾಗ ಮಾತ್ರ ಆ ದೇಶ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಲಾಗುತ್ತೆ

Bengaluru, Karnataka, India
Edited By: Satish Raj Goravigere

ಒಂದು ದೇಶದಲ್ಲಿ ವಿದ್ಯಾರ್ಥಿಗಳಿಗೆ (good education for students) ಸರಿಯಾದ ಶಿಕ್ಷಣ ದೊರೆತಾಗ ಮಾತ್ರ ಆ ದೇಶ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಲಾಗುತ್ತೆ

ಇದೇ ಕಾರಣಕ್ಕೆ ಶಿಕ್ಷಣವನ್ನು ಉಚಿತವಾಗಿ (free education) ಕೊಡಬೇಕು ಎಂದು ಕೂಡ ಹೇಳಲಾಗಿದೆ, ಬಡವರಿಗೆ ಶಿಕ್ಷಣವನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಅವರಿಗೆ ಶಿಕ್ಷಣ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯ.

Government Scheme

ಈಗಾಗಲೇ ಕರ್ನಾಟಕದಲ್ಲಿ ಇರುವ ಕನ್ನಡ ಶಾಲೆ ಅಥವಾ ಸರ್ಕಾರಿ (Government schools and colleges) ಶಾಲೆಗಳನ್ನ ಅಭಿವೃದ್ಧಿ ಮಾಡುವ ಸಲುವಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ

ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಪರಿಹರಿಸಿ; ಸಿಎಂ ಆದೇಶ

ಇತ್ತೀಚಿನ ದಿನಗಳಲ್ಲಿ ಮಾನ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ (education minister Madhu Bangarappa) ವ್ಯವಸ್ಥೆಯಲ್ಲಿ ಹೊಸ ವಿಚಾರಗಳನ್ನು ಅಳವಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ವರ್ಷಕ್ಕೆ ಒಂದೇ ಪರೀಕ್ಷೆ ಎನ್ನುವ ಪರಿಪಾಠವನ್ನು ಬದಲಿಸಿ ವರ್ಷದಲ್ಲಿ ಮೂರು ಪರೀಕ್ಷೆಗಳನ್ನು ನಡೆಸಿ ಅನುತ್ತೀರ್ಣರಾದ (failed student) ವಿದ್ಯಾರ್ಥಿಗಳು ಕೂಡ ಅದೇ ವರ್ಷ ಹೆಚ್ಚುವರಿ ಎರಡು ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆ

ಆ ಮೂಲಕ ಅದೇ ವರ್ಷ ಮತ್ತೆ ಮುಂದಿನ ತರಗತಿಗೆ ಹೋಗಲು ಅನುಕೂಲ ಮಾಡಿಕೊಡಲಾಗುವುದು, ಇದು ದ್ವಿತೀಯ ಪಿಯುಸಿ (second PUC) ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ನಿಯಮವಾಗಿದೆ.

ರದ್ದಾಗುತ್ತೆ ರೇಷನ್ ಕಾರ್ಡ್, ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಸರ್ಕಾರದ ಹೊಸ ಕ್ರಮ

ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ (nutrient food for children)

Government Schoolಪ್ರಾಥಮಿಕ ಅಥವಾ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪಡೆದುಕೊಂಡರೆ ಹೆಚ್ಚಿನ ಬೆನಿಫಿಟ್ ಇದೆ ಎನ್ನಬಹುದು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ, ಶೂ ಸಾಕ್ಸ್ ಮೊದಲಾದವುಗಳ ಜೊತೆಗೆ ಉಚಿತವಾಗಿ ಪೌಷ್ಟಿಕ ಆಹಾರ ನೀಡುವ ಬಗ್ಗೆಯೂ ಕೂಡ ಸರ್ಕಾರ ಗಮನವಹಿಸಿದೆ.

ಸರ್ಕಾರಿ ಶಾಲೆಯಲ್ಲಿ ಬಿಸಿ ಊಟ ನೀಡುವ ಯೋಜನೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಇದನ್ನ ಈಗಲೂ ಕೂಡ ರಾಜ್ಯ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ

ಇದರ ಜೊತೆಗೆ ವಾರದಲ್ಲಿ ಎರಡು ದಿನ ಕೋಳಿ ಮೊಟ್ಟೆ ಅಥವಾ ಶೇಂಗಾ ಚಿಕ್ಕಿ ನೀಡುವುದಾಗಿಯೂ ಸರ್ಕಾರ ಹೇಳಿದೆ, ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪೌಷ್ಠಿಕ ಆಹಾರವನ್ನು ಕೂಡ ಪಡೆದುಕೊಳ್ಳುವಂತಾಗಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ

ವಿದ್ಯಾಧಾಮ ನಿರ್ಮಾಣಕ್ಕೆ ಚಾಲನೆ (Vidyadhama scheme)

ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತು ಪಾಠ ಕೇಳಬೇಕು ಎಂದರೆ ಆ ವಾತಾವರಣವೂ ಕೂಡ ಅಷ್ಟೇ ಉತ್ತಮವಾಗಿರಬೇಕು, ಜೊತೆಗೆ ಕಟ್ಟಡವು ಕೂಡ ಸರಿಯಾಗಿ ಇದ್ದರೆ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಕೂಡ ಸಾಧ್ಯವಾಗುತ್ತದೆ.

ಈ ಕಾರಣಕ್ಕಾಗಿ ನರೇಗಾ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾಧಾಮ ನಿರ್ಮಿಸಿ ಕೊಡುವ ಕಾಮಗಾರಿ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಚಾಲನೆ ನೀಡಿದ್ದಾರೆ.

ನರೇಗಾ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವ ಕಟ್ಟಡ ನಿರ್ಮಾಣ ಕಾಮಗಾರಿ ವಿದ್ಯಾಧಾಮ ಯೋಜನೆ ಆರಂಭವಾಗಿದೆ. ಈ ಮೂಲಕ ಸಾಕಷ್ಟು ಶಾಲೆಗಳ ಪುನರುಜ್ಜೀವನ ಆಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಿಗೂ ಕೂಡ ವಿದ್ಯಾಧಾಮ ಯೋಜನೆ ಪ್ರಯೋಜನ ಸಿಗಲಿದೆ.

Good news for government school students, Another new Scheme is implemented