Loan Scheme : ನಮ್ಮ ದೇಶವು ಕಲೆಗಳ ತವರೂರಾಗಿದೆ. ಇಲ್ಲಿಯ ಜನರು ಪ್ರತಿಭಾನ್ವಿತರು, ಬುದ್ಧಿವಂತರು ಆಗಿದ್ದಾರೆ. ಹಾಗಾಗಿಯೇ ಇಲ್ಲಿ ಸರಿಯಾಗಿ ಬೆಲೆ ಸಿಗದ ಕಾರಣ ಹೆಚ್ಚಿನ ಜನರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಆರ್ಥಿಕವಾಗಿ ಸಮಸ್ಯೆ ಇರುವವರು ಇಲ್ಲಿಯೇ ತಮಗೆ ಸಿಕ್ಕ ಕೆಲಸ ಮಾಡಿಕೊಂಡಿದ್ದಾರೆ. ಇದನ್ನು ಅರಿತ ಕೇಂದ್ರ ಸರ್ಕಾರವು ಪ್ರತಿಭಾನ್ವಿತರು ತಮಗೆ ಸೂಕ್ತವಾದ ಕೆಲಸ ಮಾಡಲಿ ಎನ್ನುವ ಸಲುವಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹಾಗಾದರೆ ಆ ಯೋಜನೆ ಯಾವುದು? ಎಷ್ಟು ಸಾಲ ಸೌಲಭ್ಯ ಸಿಗಲಿದೆ? ಯಾರಿಗೆಲ್ಲ ಸಿಗಲಿದೆ ಎಂದು ಈಗ ನೋಡೋಣ.
![ಯಾವುದೇ ಗ್ಯಾರಂಟಿ ಬೇಕಿಲ್ಲ! ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್ - Kannada News Mudra Loan](https://kannadanews.today/wp-content/uploads/2023/09/PM-Mudra-Loan-Scheme-Eligibility-Benefit-Documents-and-Other-Key-Details.jpg.webp)
ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತೆ 50% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!
ದೇಶದ ಸಾಂಪ್ರದಾಯಿಕ ಕಲೆಗಳಿಗೆ (Traditional art) ಪ್ರೋತ್ಸಾಹ ನೀಡುವ ಜೊತೆಗೆ ಕರಕುಶಲಕರ್ಮಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (pradhanmantri Vishwakarma Yojana) ಜಾರಿಗೆ ತಂದಿದೆ.
ಈ ಯೋಜನೆ ಅಡಿಯಲ್ಲಿ 13 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆ ಫಲಾನುಭವಿಗಳಿಗೆ 3 ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ (loan facility) ನೀಡಲಿದೆ.
ನಮ್ಮ ದೇಶದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಇರುವ 18 ಬಗೆಯ ಕರಕುಶಲ ಕರ್ಮಿಗಳಿಗೆ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಕೌಶಲ್ಯ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಮತ್ತು ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ.
ಈ ಬ್ಯಾಂಕ್ ಖಾತೆ ಇದ್ರೆ ಸರ್ಕಾರವೇ ನೀಡುತ್ತೆ 2.30 ಲಕ್ಷ ರೂಪಾಯಿ; ಬೆನಿಫಿಟ್ ಪಡೆಯಿರಿ
ಈ ಯೋಜನೆ ಫಲಾನುಭವಿಯಾಗಿ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸಹ ಸರ್ಕಾರವೇ ಒದಗಿಸಿಕೊಡಲಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮೂಲಕ ಹೆಚ್ಚಿನ ಯುವಕರು ಪ್ರಯೋಜನ ಪಡೆದುಕೊಳ್ಳಬಹುದು.
ಅಕ್ಕಸಾಲಿಗ, ಕ್ಷೌರಿಕ, ಚಮ್ಮಾರರಂತಹ ಬೇರೆ ಬೇರೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರು ಈ ಯೋಜನೆ ಲಾಭ ಪಡೆದುಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಲಕ್ಷ ರೂಪಾಯಿಗಳವರೆಗೆ ಯಾವುದೇ ಖಾತರಿ (without guarantee) ಇಲ್ಲದೆ ಸಾಲ ನೀಡಲಾಗುತ್ತದೆ.
ಈ ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ 1 ಲಕ್ಷ ರೂ. ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂ. ನೀಡಲಾಗುತ್ತದೆ. ಸರಿಯಾಗಿ ಸಾಲ ಮರುಪಾವತಿ (loan repayment) ಮಾಡುವವರಿಗೆ ಶೇ.5 ರಷ್ಟು ರಿಯಾಯತಿ ಸಹ ನೀಡಲಾಗುತ್ತದೆ.
ನೀವೇನಾದ್ರೂ ಈ ಬಿಸಿನೆಸ್ ಶುರು ಮಾಡಿದ್ರೆ, ದಿನಕ್ಕೆ 15,000 ಆದಾಯ ಫಿಕ್ಸ್!
ಅರ್ಹತೆಗಳು
18 ವರ್ಷ ಮೇಲ್ಪಟ್ಟವರಾಗಿರಬೇಕು.
ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು.
ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಕಳೇದ 5 ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವುದೇ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರಬಾರದು
ಬೇಕಾಗುವ ದಾಖಲಾತಿಗಳು
ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ಪಾನ್ ಕಾರ್ಡ್
ವಿಳಾಸ ದೃಢಿಕರಣ ದಾಖಲೆ
ಮೊಬೈಲ್ ನಂಬರ್
ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳು
ಆದಾಯ ಮತ್ತು ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರಗಳು
ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
No guarantee required, Get 2 lakh loan from the central government
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.